Webdunia - Bharat's app for daily news and videos

Install App

ಅನಿಲ್ ಕುಂಬ್ಳೆ ಕನ್ನಡ ಕವನ ವಾಚನಕ್ಕೆ ಫಿದಾ ಆದ ಕನ್ನಡಿಗರು

Webdunia
ಶನಿವಾರ, 16 ನವೆಂಬರ್ 2019 (08:39 IST)
ಬೆಂಗಳೂರು: ಸ್ಪಿನ್ ಮೋಡಿಗಾರ ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಹೆಸರು ಮಾಡಿದ್ದರೂ ಇಂದಿಗೂ ತಮ್ಮ ಭಾಷೆ, ನೆಲ ಮರೆತಿಲ್ಲ. ಅದನ್ನು ಅವರು ಕವನ ವಾಚನ ಸವಾಲು ಸ್ವೀಕರಿಸುವ ಮೂಲಕ ಸಾಬೀತುಪಡಿಸಿದ್ದಾರೆ.


ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವ ಕವನ ವಾಚನ ಅಭಿಯಾನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅನಿಲ್ ಕುಂಬ್ಳೆಗೆ ಕವನ ವಾಚನದ ಸವಾಲೊಡ್ಡಿದ್ದರು. ಅದನ್ನು ಸ್ವೀಕರಿಸಿರುವ ಅಪ್ಪಟ ಕನ್ನಡ ಪ್ರತಿಭೆ ಕುಂಬ್ಳೆ ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು ಎಂಬ ಕನ್ನಡ ಕವನ ವಾಚನ ಮಾಡಿದ್ದಾರೆ.

ಅಷ್ಟೇ ಅಲ್ಲ ತಾವು ಕವನ ವಾಚನ ಮಾಡಿದ ಮೇಲೆ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್ ಮತ್ತು ಗಾಯಕ ವಿಜಯ್ ಪ್ರಕಾಶ್ ಗೆ ಈ ಚಾಲೆಂಜ್ ವರ್ಗಾಯಿಸಿದ್ದಾರೆ. ಅದರಲ್ಲೂ ವಿಜಯ್ ಪ್ರಕಾಶ್ ಹಾಡಿನ ಮೂಲಕವೇ ಕವನ ಹೇಳಬೇಕು ಎಂದು ಷರತ್ತು ಹಾಕಿದ್ದಾರೆ.

ಅನಿಲ್ ಕುಂಬ್ಳೆ ಕನ್ನಡ ಕವನ ವಾಚನ ಮಾಡಿರುವ ವಿಡಿಯೋ ನೋಡಿರುವ ಅಭಿಮಾನಿಗಳು ನೀವು ನಮ್ಮ ಕನ್ನಡದ ಹೆಮ್ಮೆ ಸರ್. ಎಷ್ಟೇ ಖ್ಯಾತಿ ಬಂದರೂ ಇಂದಿಗೂ ಕನ್ನಡ ಮರೆತಿಲ್ವಲ್ಲಾ ಎಂದು ಅಭಿನಂದಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗೌತಮ್ ಗಂಭೀರ್ ತಾನಾಗಿಯೇ ಕೋಚ್ ಹುದ್ದೆ ಬಿಟ್ರೆ ಒಳ್ಳೇದು

ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ

RCB ವೇಗಿ ಯಶ್ ದಯಾಳ್ ವಿರುದ್ಧ ಬಾಲಕಿ ಮೇಲೆ ರೇಪ್ ಆರೋಪ: ಎಫ್ಐಆರ್ ದಾಖಲು

Rishabh Pant: ಅನಿಲ್ ಕುಂಬ್ಳೆಯನ್ನು ನೆನಪಿಸಿದ ರಿಷಭ್ ಪಂತ್

END vs IND Match, ಗ್ರೌಂಡ್‌ಗೆ ಕೈಮುಗಿದು ಕುಟುಂತ್ತಲೇ ಬ್ಯಾಟಿಂಗ್‌ಗೆ ಬಂದ ರಿಷಬ್ ಪಂತ್‌, Video

ಮುಂದಿನ ಸುದ್ದಿ
Show comments