Publish Date: Mon, 20 Nov 2023 (08:30 IST)
Updated Date: Mon, 20 Nov 2023 (08:56 IST)
ಅಹಮ್ಮದಾಬಾದ್: ಭಾರತ ಕ್ರಿಕೆಟ್ ಮತ್ತು ಅಂಪಾಯರ್ ರಿಚರ್ಡ್ ಕೆಟಲ್ ಬರೊಗೆ ಅದೃಷ್ಟ ಆಗಿ ಬರಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ.
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫೀಲ್ಡ್ ಅಂಪಾಯರ್ ಆಗಿದ್ದ ರಿಚರ್ಡ್ ಕೆಟಲ್ ಬರೊ ಭಾರತದ ಪಾಲಿಗೆ ದುರಾದೃಷ್ಟ ಎಂದು ಕ್ರಿಕೆಟ್ ಪ್ರಿಯರು ನಂಬುತ್ತಾರೆ. ಅದೀಗ ನಿಜವಾಗಿದೆ. ಕೆಟಲ್ ಬರೊ ಈ ಹಿಂದೆ ಐಸಿಸಿ ಟೂರ್ನಿಗಳಲ್ಲಿ ಅಂಪಾಯರಿಂಗ್ ಮಾಡಿದಾಗಲೆಲ್ಲಾ ಭಾರತ ಸೋತಿದೆ.
ನಿನ್ನೆ ಫೀಲ್ಡ್ ಅಂಪಾಯರ್ ಕೆಟಲ್ ಬರೊ ಎಂದು ಗೊತ್ತಾದಾಗಲೇ ಭಾರತೀಯ ಪ್ರೇಕ್ಷಕರು ಇದು ದುರಾದೃಷ್ಟ ಎಂದು ಆತಂಕ ಪಟ್ಟಿದ್ದರು. ದುರಾದೃಷ್ಟವೆಂದರೆ ಅಭಿಮಾನಿಗಳ ಆತಂಕ ನಿಜವಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ಫ್ಯಾನ್ಸ್ ಕೆಟಲ್ ಬರೊಗೆ ಹಿಡಿಶಾಪ ಹಾಕಿದರು.
ಮುಂದೆ ಯಾವತ್ತೂ ನೀವು ಭಾರತ ಪಂದ್ಯದಲ್ಲಿ ಅಂಪಾಯರ್ ಆಗಿ ಇರಬೇಡಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2019 ರ ವಿಶ್ವಕಪ್ ಸೆಮಿಫೈನಲ್ ವೇಳೆಯೂ ಕೆಟಲ್ ಬರೊ ಅಂಪಾಯರ್ ಆಗಿದ್ದರು. ಆಗಲೂ ಅಭಿಮಾನಿಗಳ ಹೃದಯ ಚೂರಾಗಿತ್ತು.