Publish Date: Sat, 07 Jul 2018 (09:49 IST)
Updated Date: Sat, 07 Jul 2018 (09:51 IST)
ಕಾರ್ಡಿಫ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇಷ್ಟು ಹೀನಾಯವಾಗಿ ಸೋತಿದ್ದು ಹೇಗೆ?
ಅದಕ್ಕೆ ಉತ್ತರ ಸ್ವತಃ ನಾಯಕ ವಿರಾಟ್ ಕೊಹ್ಲಿ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಅತಿಥೇಯರಿಗೆ ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ದುಸ್ವಪ್ನರಾಗಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲಿ ಅವರನ್ನು ಎದುರಿಸುವ ಬಗೆ ಹೇಗೆಂದು ತಯಾರಿ ಮಾಡಿಕೊಂಡು ಬರುವುದಾಗಿ ಹೇಳಿದ್ದರು.
ಅದರಂತೇ ಇಂಗ್ಲೆಂಡ್ ಕ್ರಿಕೆಟಿಗರು ರಿಸ್ಟ್ ಸ್ಪಿನ್ನರ್ ಗಳನ್ನು ಎದುರಿಸುವ ಕಲೆಯನ್ನು ಕರಗತ ಮಾಡಿಕೊಂಡು ಬಂದಿದ್ದರು. ಅದರಂತೇ ಆಡಿ ಗೆದ್ದರು. ‘ಈಗ ಕುಲದೀಪ್ ರನ್ನು ಎದುರಿಸುವುದು ಹೇಗೆಂದು ಇಂಗ್ಲೆಂಡ್ ಕ್ರಿಕೆಟಿಗರು ಅರಿತಿದ್ದಾರೆ. ಇದುವೇ ನಮಗೆ ದೊಡ್ಡ ಹೊಡೆತ ನೀಡಿತು. ಇನ್ನು, 6 ಓವರ್ ಗಳಲ್ಲಿ ಕೇವಲ 30 ರನ್ ಗಳಿಸಿ 3 ವಿಕೆಟ್ ಉದುರಿಸಿಕೊಂಡಾಗ ದೊಡ್ಡ ಮೊತ್ತ ಗಳಿಸುವುದು ಕಷ್ಟವೇ. ಕೊನೆಗೆ ಹೇಲ್ಸ್ ನಮ್ಮಿಂದ ಪಂದ್ಯ ಕಸಿದುಕೊಂಡರು’ ಎಂದು ವಿರಾಟ್ ಕೊಹ್ಲಿ ಪಂದ್ಯ ನಂತರ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.