Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗೆ ಸ್ನಾನ ಮಾಡಕ್ಕೂ ಪುರುಸೊತ್ತು ಸಿಗಲಿಲ್ಲ! ಅಶ್ವಿನ್ ಕಾಲು ಅಲ್ಲಾಡಿಸಲಿಲ್ಲ!

indian players
ಚೆನ್ನೈ , ಸೋಮವಾರ, 9 ಅಕ್ಟೋಬರ್ 2023 (10:17 IST)
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ನಲ್ಲಿ ದಿಡೀರ್ ಕುಸಿತ ಕಂಡಾಗ ಡ್ರೆಸ್ಸಿಂಗ್ ರೂಂನಲ್ಲಿ ಏನೇನಾಯ್ತು ಎಂದು ಈಗ ಬಹಿರಂಗವಾಗಿದೆ.

ಪಂದ್ಯದ ಬಳಿಕ ಮಾತನಾಡಿದ್ದ ಕೆಎಲ್ ರಾಹುಲ್ ‘ನಾನು ಆಗಷ್ಟೇ ಸ್ನಾನ ಮುಗಿಸಿದ್ದೆ. ಅರ್ಧಗಂಟೆ ರಿಲ್ಯಾಕ್ಸ್ ಮಾಡೋಣ ಎಂದುಕೊಂಡಿದ್ದೆ. ಆದರೆ ನನಗೆ ಉಸಿರಾಡಕ್ಕೂ ಸಮಯ ಸಿಗಲಿಲ್ಲ. ಕ್ರೀಸ್ ಗೆ ಬರಬೇಕಾಯಿತು’ ಎಂದಿದ್ದರು.

ಇನ್ನು, ರವಿಚಂದ್ರನ್ ಅಶ್ವಿನ್ ಮೂರು ವಿಕೆಟ್ ಕಳೆದುಕೊಂಡಾಗ ಆಗ ಟೆನ್ ಷನ್ ಬಗ್ಗೆ ಹೇಳಿಕೊಂಡಿದ್ದಾರೆ. ‘ಕೊಹ್ಲಿ ಹೊಡೆದ ಬಾಲ್ ಒಮ್ಮೆ ಗಾಳಿಯಲ್ಲಿ ತೇಲಿದಾಗ ಗಾಬರಿಯಿಂದ ಡ್ರೆಸ್ಸಿಂಗ್ ರೂಂನಿಂದ ಹೊರಗೆ ಓಡಿ ಬಂದಿದ್ದೆ. ನನಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಬಳಿಕ ಜನರು ಹರ್ಷೋದ್ಗಾರ ಮಾಡುತ್ತಿರುವುದನ್ನು ನೋಡಿ ಸಮಾಧಾನದಿಂದ ಮತ್ತೆ ಡ್ರೆಸ್ಸಿಂಗ್ ರೂಂಗೆ ಹೋದೆ. ಅಲ್ಲಿ ಹೋಗಿ ಕೂತವನು ಪಂದ್ಯ ಮುಗಿಯುವ ತನಕವೂ ಕಾಲು ಕೂಡಾ ಅಲ್ಲಾಡಿಸದೇ ಕೂತೇ ಇದ್ದೆ. ಈಗಲೂ ನನಗೆ ಕಾಲು ನೋಯುತ್ತಿದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ನ್ಯೂಜಿಲೆಂಡ್, ನೆದರ್ಲ್ಯಾಂಡ್ಸ್ ಗೆ ಎರಡನೇ ಪಂದ್ಯ