Publish Date: Mon, 07 May 2018 (07:23 IST)
Updated Date: Mon, 07 May 2018 (07:26 IST)
ಪುಣೆ: ಟೀಂ ಇಂಡಿಯಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಧೋನಿ ಯಶಸ್ಸಿನ ಉತ್ತುಂಗಕ್ಕೇರಿದವರು. ಅವರು ನಾಯಕನಾಗಿ ತಂಡದ ಸಭೆಯಲ್ಲಿ ಏನು ಹೇಳುತ್ತಾರೆ ಗೊತ್ತಾ?!
ಧೋನಿ ಸದಾ ತಮ್ಮ ತಂಡಕ್ಕೆ ಸ್ಪೂರ್ತಿ ತುಂಬುವ ನಾಯಕ. ಅವರು ಪಂದ್ಯಕ್ಕೆ ಮೊದಲು ನಡೆಸುವ ಪೆಪ್ ಟಾಕ್ ಸಂದರ್ಭ ಸಹ ಆಟಗಾರರಿಗೆ ಏನು ಹೇಳುತ್ತಾರೆ ಎಂಬುದನ್ನು ಸಹ ಆಟಗಾರ ರವೀಂದ್ರ ಜಡೇಜಾ ಬಹಿರಂಗಪಡಿಸಿದ್ದಾರೆ.
‘ಪಂದ್ಯಕ್ಕೆ ಮೊದಲು ಧೋನಿ ಯಾವತ್ತೂ ಹೇಳುವುದು ಒಂದೇ ಮಾತು. ನಾವು ಗೆಲ್ಲುವುದಿದ್ದರೂ, ಸೋಲುವುದಿದ್ದರೂ, ಜತೆಗೇ ಇರೋಣ. ಈ ಮೂಲಕ ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ’ ಎಂದು ಜಡೇಜಾ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.