ನಾನು ನಿಮ್ಮ ಕಣ್ಣಿಗೆ ಕಾಣಿಸದಂತೆ ಹೊರಟುಬಿಡುತ್ತೇನೆ: ವಿರಾಟ್ ಕೊಹ್ಲಿ ಭಾವುಕ ಹೇಳಿಕೆ

Krishnaveni K
ಗುರುವಾರ, 16 ಮೇ 2024 (13:13 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಅವರ ಈ ಮಾತುಗಳು ಅಭಿಮಾನಿಗಳಿಗೂ ಬೇಸರ ತರಿಸಬಹುದು.

ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ನಂತಹ ದಿಗ್ಗಜ ಕ್ರಿಕೆಟಿಗರು ಕ್ರಿಕೆಟ್ ನಿಂದ ನಿವೃತ್ತಿಯಾಗುವುದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಈ ಹಿಂದೆ ಸಚಿನ್ ನಿವೃತ್ತಿಯಾದಾಗ ಎಷ್ಟೋ ಜನ ಕ್ರಿಕೆಟ್ ನೋಡುವುದನ್ನೇ ನಿಲ್ಲಸಿದ್ದರು. ಇದೀಗ ಕೊಹ್ಲಿ ನಿವೃತ್ತಿ ಬಗ್ಗೆ ಯಾರಾದರೂ ಹೇಳಿದರೂ ಅಭಿಮಾನಿಗಳಿಗೆ ಅದೇ ರೀತಿಯ ಸಂಕಟವಾಗುತ್ತಿದೆ.

ಇದೀಗ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ತಮ್ಮ ನಿವೃತ್ತಿ ಬಗ್ಗೆ ಮನದಾಳ ಬಿಚ್ಚಿಟ್ಟಿದ್ದಾರೆ. ‘ಕ್ರೀಡಾಳುಗಳೆಂದ ಮೇಲೆ ನಮ್ಮ ವೃತ್ತಿ ಜೀವನ ಎಂದಾದರೂ ಕೊನೆಗೊಳ್ಳಲೇಬೇಕು. ನಾನು ಕೂಡಾ ಆಡುತ್ತಲೇ ಇರಲು ಸಾಧ‍್ಯವಿಲ್ಲ. ನನಗೆ ಗೊತ್ತು, ನನಗೆ ಯಾವುದೇ ಪಶ‍್ಚಾತ್ತಾಪವಿಲ್ಲ. ನಾನು ಆಡುತ್ತಿರುವಷ್ಟು ಸಮಯವೂ ನನ್ನಿಂದ ಸಾಧ‍್ಯವಾದ ಎಲ್ಲಾ ಪ್ರಯತ್ನ ಮಾಡುತ್ತೇನೆ, ಆದರೆ ಒಮ್ಮೆ ನಾನು ನಿವೃತ್ತಿ ಹೇಳಿದರೆ, ಅಲ್ಲಿಗೆ ಮುಗಿಯಿತು. ಬಹುಶಃ ನಿಮಗೆ ನಾನು ಕೆಲವು ಸಮಯ ಕಣ್ಣಿಗೂ ಕಾಣಿಸಲ್ಲ’ ಎಂದಿದ್ದಾರೆ.

‘ಹಾಗಂತ ನಾನು ತರಾತುರಿಯಲ್ಲಿ ನಿವೃತ್ತಿ ಹೇಳಲ್ಲ. ನಿವೃತ್ತಿ ಹೇಳಿದ ಮೇಲೂ ಛೇ ನಾನು ಇದನ್ನು ಮಾಡಬಹುದಿತ್ತು ಎಂದು ಪಶ್ಚಾತ್ತಾಪ ಪಡುವಂತಿರಬಾರದು. ಆಡುವಷ್ಟು ದಿನ ನಾನು ಸಕಲ ಪ್ರಯತ್ನ ನಡೆಸುತ್ತೇನೆ. ಆಟ ಸಾಕು ಎನಿಸಿದಾಗ ಇಷ್ಟು ಸಮಯ  ಆಡಿದ್ದಷ್ಟೇ ನನ್ನ ನೆನಪಿನಲ್ಲಿರಲಿದೆ’ ಎಂದು ಕೊಹ್ಲಿ ಹೇಳಿದ್ದಾರೆ. ಅವರ ಈ ಮಾತುಗಳು ನೆಟ್ಟಿಗರನ್ನೂ ಭಾವುಕರನ್ನಾಗಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್‌ ತಂದೆಯಿಂದಲೇ ಬಂತು ಅಭಿಮಾನಿಗಳಿಗೆ ಸಂದೇಶ, ಇಲ್ಲಿದೆ ಮಾಹಿತಿ

ರೋಹಿತ್, ವಿರಾಟ್ ಕೊಹ್ಲಿ ಟೀಕಕಾರರಿಗೆ ಚಾಟಿ ಬೀಸಿದ ಎಬಿ ಡಿಲಿವಿಯರ್ಸ್‌

ಗಾಯಗೊಂಡ ಪ್ರತೀಕಾ ರಾವಲ್ ಜಾಗಕ್ಕೆ ಸ್ಥಾನ ಗಿಟ್ಟಿಸಿಕೊಂಡ ಶಫಾಲಿ ವರ್ಮಾ

ಶ್ರೇಯಸ್ ಅಯ್ಯರ್ ಪೋಷಕರ ಆಗಮನಕ್ಕಾಗಿ ಕಾಯುತ್ತಿರುವ ಬಿಸಿಸಿಐ, ಯಾಕೆ ಗೊತ್ತಾ

ಶ್ರೇಯಸ್ ಅಯ್ಯರ್ ಹೇಗಿದ್ದಾರೆ ಎಂದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಹೇಳಿದ್ದೇನು

ಮುಂದಿನ ಸುದ್ದಿ
Show comments