Select Your Language

Notifications

webdunia
webdunia
webdunia
webdunia

ನಾಯಕತ್ವ ತ್ಯಜಿಸಿದಾಗ ಧೋನಿ ಬಿಟ್ಟು ಯಾರೂ ನನಗೆ ಕರೆ ಮಾಡಲಿಲ್ಲ: ಬೇಸರ ಹೊರಹಾಕಿದ ವಿರಾಟ್ ಕೊಹ್ಲಿ

ನಾಯಕತ್ವ ತ್ಯಜಿಸಿದಾಗ ಧೋನಿ ಬಿಟ್ಟು ಯಾರೂ ನನಗೆ ಕರೆ ಮಾಡಲಿಲ್ಲ: ಬೇಸರ ಹೊರಹಾಕಿದ ವಿರಾಟ್ ಕೊಹ್ಲಿ
ದುಬೈ , ಸೋಮವಾರ, 5 ಸೆಪ್ಟಂಬರ್ 2022 (09:40 IST)
ದುಬೈ: ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದ ಬಳಿಕ ಮಾ‍ಧ್ಯಮಗಳೊಂದಿಗೆ ಮಾತನಾಡಿರುವ ವಿರಾಟ್ ಕೊಹ್ಲಿ ಮನದಾಳ ಬಿಚ್ಚಿಟ್ಟಿದ್ದಾರೆ.

ಕೊಹ್ಲಿ ಈ ಪಂದ್ಯದ ಮೂಲಕ ಮರಳಿ ಫಾರ್ಮ್ ಗೆ ಬಂದಿರುವ ಸೂಚನೆ ನೀಡಿದ್ದಾರೆ. ಹೀಗಾಗಿ ಸಹಜವಾಗಿಯೇ ಅವರ ಆತ್ಮವಿಶ್ವಾಸ ಹೆಚ್ಚಿದೆ. ಜೊತೆಗೆ ತಾವು ನಾಯಕತ್ವ ತ್ಯಜಿಸಿದ ನಿರ್ಧಾರ ಪ್ರಕಟಿಸಿದಾಗ ನಡೆದ ಏನಾಗಿತ್ತು ಎಂಬುದನ್ನು ಮನಬಿಚ್ಚಿ ಮಾತನಾಡಿದ್ದಾರೆ.

‘ನಾನು ಟೆಸ್ಟ್ ನಾಯಕತ್ವ ತ್ಯಜಿಸಿದಾಗ ಕೇವಲ ಧೋನಿ ಮಾತ್ರ ನನಗೆ ಕರೆ ಮಾಡಿದರು. ಎಲ್ಲರ ಬಳಿಯೂ ನನ್ನ ನಂಬರ್ ಇತ್ತು. ಹಾಗಿದ್ದರೂ ಧೋನಿ ಹೊರತಾಗಿ ಬೇರೆ ಯಾರೂ ಮಾಡಲಿಲ್ಲ. ಇದು ನನ್ನ ಮತ್ತು ಧೋನಿ ನಡುವಿನ ಬಾಂಧವ್ಯಕ್ಕೆ ಸಾಕ್ಷಿ. ನನಗೆ ಯಾರಿಗಾದರೂ ಏನಾದರೂ ಹೇಳಬೇಕು ಎನಿಸಿದರೆ ಪಬ್ಲಿಕ್ ಆಗಿ ಹೇಳುವ ಬದಲು ವೈಯಕ್ತಿಕವಾಗಿ ಆ ವ್ಯಕ್ತಿಯ ಬಳಿಗೆ ಹೋಗಿ ಹೇಳಬೇಕಾದ್ದನ್ನು ಹೇಳುತ್ತೇನೆ. ಇದು ಒಬ್ಬರ ಮೇಲೆ ನಿಮಗಿರುವ ಗೌರವ ಮತ್ತು ಸಂಬಂಧ ಎಂಥದ್ದು ಎಂದು ತೋರಿಸುತ್ತದೆ’ ಎಂದು ಕೊಹ್ಲಿ ಭಾವುಕರಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಚ್ ಬಿಟ್ಟು ವಿಲನ್ ಆದ ಅರ್ಷ್ ದೀಪ್ ಸಿಂಗ್ ಗೆ ಮಾಜಿ ಕ್ರಿಕೆಟಿಗರ ಬೆಂಬಲ