Publish Date: Tue, 29 Jan 2019 (09:20 IST)
Updated Date: Tue, 29 Jan 2019 (09:22 IST)
ಬೇ ಓವಲ್: ನಿನ್ನೆ ನಡೆದ ತೃತೀಯ ಏಕದಿನ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಸರಣಿಯಿಂದ ಅರ್ಧಕ್ಕೇ ತವರಿಗೆ ಮರಳಿದ್ದಾರೆ.
ಕೊಹ್ಲಿಗೆ ಉಳಿದೆರಡು ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿರಾಟ್ ಸರಣಿ ಗೆಲುವಿನ ಬಳಿಕ ತವರಿಗೆ ಮರಳುತ್ತಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾಗೆ ತಂಡದ ಹೊಣೆ ಸಿಗಲಿದೆ.
ಈ ಬಗ್ಗೆ ಮಾತನಾಡಿರುವ ಕೊಹ್ಲಿ ನನ್ನ ಸ್ಥಾನವನ್ನು ಯಾವತ್ತಿಗೇ ಆದರೂ ಯಾರಾದರೊಬ್ಬರು ತುಂಬಲೇ ಬೇಕು. ಆಸ್ಟ್ರೇಲಿಯಾ ಸರಣಿ ಬಳಿಕ ತುಂಬಾ ಬ್ಯುಸಿಯಾಗಿದ್ದೆ. ಈಗ ನನಗೆ ವಿಶ್ರಾಂತಿ ಬೇಕಾಗಿದೆ. ನಾನು ನನ್ನ ಬಿಡುವಿನ ವೇಳೆಯನ್ನು ಎಂಜಾಯ್ ಮಾಡಲಿದ್ದೇನೆ. ನನ್ನ ಸ್ಥಾನಕ್ಕೆ ಹಲವು ಯುವ ಪ್ರತಿಭಾವಂತ ಆಟಗಾರರು ತಂಡಕ್ಕೆ ಬರಬಹುದು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಪೃಥ್ವಿ ಶಾ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ