Select Your Language

Notifications

webdunia
webdunia
webdunia
webdunia

ಭಾರತಕ್ಕೆ ಬಂದಾಗ ಇವರಿಗೆ ಬುದ್ಧಿ ಕಲಿಸ್ತೀವಿ ಎಂದ ವಿರಾಟ್ ಕೊಹ್ಲಿ

ಭಾರತಕ್ಕೆ ಬಂದಾಗ ಇವರಿಗೆ ಬುದ್ಧಿ ಕಲಿಸ್ತೀವಿ ಎಂದ ವಿರಾಟ್ ಕೊಹ್ಲಿ
ಕ್ರಿಸ್ಟ್ ಚರ್ಚ್ , ಮಂಗಳವಾರ, 3 ಮಾರ್ಚ್ 2020 (09:53 IST)
ಕ್ರಿಸ್ಟ್ ಚರ್ಚ್: ಟೀಂ ಇಂಡಿಯಾ ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಮಾತನ್ನು ಸಮರ್ಥಿಸುವಂತೆ ನ್ಯೂಜಿಲೆಂಡ್ ನಲ್ಲಿ ಏಕದಿನ, ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಅವಮಾನ ಅನುಭವಿಸಿ ಅಭಿಮಾನಿಗಳಿಂದ ಛೀಮಾರಿ ಹಾಕಿಸಿಕೊಂಡಿದೆ.


ಇದರ ನಡುವೆ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ತೋರಿರುವ ವರ್ತನೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಕೊಹ್ಲಿಯ ಬೆರಳು ಸನ್ನೆ ವಿವಾದದ ನಡುವೆ ಅವರು ಹೇಳಿದ್ದರೆನ್ನಲಾದ ಮತ್ತೊಂದು ಮಾತು ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ತಂಡ ಹೀನಾಯ ಸ್ಥಿತಿಯಲ್ಲಿದ್ದಾಗ ಹತಾಶೆಗೊಳಗಾದ ಕೊಹ್ಲಿ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುವಾಗ ‘ಇವರು ಭಾರತಕ್ಕೆ ಬಂದಾಗ ನಾವು ಯಾರು ಎಂದು ತೋರಿಸಿಕೊಡುತ್ತೇವೆ’ ಎಂದು ಹಿಂದಿಯಲ್ಲಿ ಸಹ ಆಟಗಾರನ ಬಳಿ ಹೇಳಿದ್ದರು ಎಂಬ ಅಂಶ ಬಯಲಾಗಿದೆ. ಕೊಹ್ಲಿಯ ಈ ವರ್ತನೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಅವರು ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿಗೆದ್ದ ಘಟನೆ ನಡೆದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಆಯ್ಕೆ ಸಮಿತಿಯ ಆಯ್ಕೆ ಇಂದು