Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ದೊಡ್ಡ ಮೊತ್ತ ಗುರಿ ಬೆನ್ನತ್ತುವ ತಲೆನೋವು

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ದೊಡ್ಡ ಮೊತ್ತ ಗುರಿ ಬೆನ್ನತ್ತುವ ತಲೆನೋವು
ಕೋಲ್ಕೊತ್ತಾ , ಸೋಮವಾರ, 2 ಮಾರ್ಚ್ 2020 (11:56 IST)
ಕೋಲ್ಕೊತ್ತಾ: ಬಂಗಾಳ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್ ನಲ್ಲಿ ಊಟದ ವಿರಾಮದ ವೇಳೆಗೆ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ.


ಇದರೊಂದಿಗೆ ಬಂಗಾಳ 343 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಕರ್ನಾಟಕ ತಾನೇ ಸಮಸ್ಯೆ ಮೈಮೇಲೆಳೆದುಕೊಂಡಿದೆ. ಕರ್ನಾಟಕ ಪರ ಅಭಿಮನ್ಯು ಮಿಥುನ್ ಇದುವರೆಗೆ 3 ವಿಕೆಟ್,  ರೋನಿತ್ ಮೋರೆ 2 ಮತ್ತು ಪ್ರಸೀದ್ ಕೃಷ್ಣ ಮತ್ತು ಕೃಷ್ಣಪ್ಪ ಗೌತಮ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ ಉತ್ತಮ ಬ್ಯಾಟಿಂಗ್ ಮಾಡಿದ್ದರೆ ಬೃಹತ್ ಮೊತ್ತ ಬೆನ್ನತ್ತುವ ಕಷ್ಟ ಎದುರಿಸಬೇಕಾಗಿರಲಿಲ್ಲ. ಇದೀಗ ಕರ್ನಾಟಕ ಬೇಗನೇ ಬಂಗಾಳವನ್ನು ಆಲೌಟ್ ಮಾಡದಿದ್ದರೆ ಸೋಲು ತಪ್ಪಿಸುವುದು ಕಷ್ಟ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಿನ ಬಳಿಕ ಪತ್ರಕರ್ತರೊಂದಿಗೆ ವಿರಾಟ್ ಕೊಹ್ಲಿ ಜಟಾಪಟಿ