Webdunia - Bharat's app for daily news and videos

Install App

ಬಣ್ಣದ ಛತ್ರಿ, ಟೋಪಿ.. ಅಬ್ಬಾ ಮಕ್ಕಳು ಕ್ಯಾಮರಾಗೆ ಕಾಣದಂತೆ ಕೊಹ್ಲಿ ದಂಪತಿ ಇಷ್ಟೆಲ್ಲಾ ಕಷ್ಟಪಡಬೇಕಾ

Krishnaveni K
ಶನಿವಾರ, 11 ಜನವರಿ 2025 (15:00 IST)
Photo Credit: X
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಇಬ್ಬರು ಮಕ್ಕಳ ಫೋಟೋಗಳನ್ನು ಹಂಚಿಕೊಂಡಿಲ್ಲ. ಇಬ್ಬರನ್ನೂ ಕ್ಯಾಮರಾ ಕಣ್ಣಿಗೆ ಬೀಳದಂತೆ ಕೊಹ್ಲಿ ಮಾಡುವ ಸರ್ಕಸ್ ಅಷ್ಟಿಷ್ಟಲ್ಲ.

ಕೊಹ್ಲಿ ಮತ್ತು ಅನುಷ್ಕಾ ಇಬ್ಬರೂ ಸ್ಟಾರ ಗಳೇ. ಹೀಗಾಗಿ ಎಲ್ಲೇ ಹೋದರೂ ಜನ ಅವರನ್ನು ಮುತ್ತಿಕೊಳ್ಳುತ್ತಾರೆ. ಕೊಹ್ಲಿ ದಂಪತಿ ಮಕ್ಕಳನ್ನು ನೋಡಲೂ ಜನ ಕಾತುರರಾಗಿದ್ದಾರೆ. ಆದರೆ ಇದುವರೆಗೆ ಇಬ್ಬರ ಮುಖ ದರ್ಶನ ಮಾಡಿಸಿಲ್ಲ ಕೊಹ್ಲಿ ದಂಪತಿ.

ತಮ್ಮ ಮಕ್ಕಳನ್ನು ಸದಾ ಕ್ಯಾಮರಾ ಕಣ್ಣುಗಳಿಗೆ ಬೀಳದಂತೆ ಕಾಪಾಡಿಕೊಳ್ಳುತ್ತಾರೆ. ಏರ್ ಪೋರ್ಟ್ ಇರಲಿ, ಮೈದಾನದಲ್ಲಿರಲಿ ಯಾವುದೇ ಸಾರ್ವಜನಿಕ ಸ್ಥಳಗಲ್ಲೂ ತಮ್ಮ ಮಕ್ಕಳು ಮುಖ ಕಾಣದಂತೆ ಮತ್ತು ತೋರಿಸಿದಂತೆ ಕ್ಯಾಮರಾ ಮ್ಯಾನ್ ಗಳಿಗೂ ಮನವಿ ಮಾಡುತ್ತಿರುತ್ತಾರೆ. ಆಸ್ಟ್ರೇಲಿಯಾ ಪ್ರವಾಸದ ವೇಳೆಯೂ ಮಾಧ್ಯಮಗಳೊಂದಿಗೆ ಕೊಹ್ಲಿ ಮಕ್ಕಳ ವಿಡಿಯೋ ಮಾಡದಂತೆ ಕಿತ್ತಾಡಿದ್ದರು.

ಇದು ಎಷ್ಟರಮಟ್ಟಿಗೆ ಎಂದರೆ ಕೊಹ್ಲಿ ದಂಪತಿ ನಿನ್ನೆ ವೃಂದಾವನಕ್ಕೆ ಭೇಟಿ ನೀಡಿದಾಗಲೂ ಮುಂದುವರಿದಿದೆ. ಕೊಹ್ಲಿ ದಂಪತಿ ಮಕ್ಕಳನ್ನು ಎತ್ತಿಕೊಂಡು ವಿಮಾನ ನಿಲ್ದಾಣದಲ್ಲಿ ಬರುವಾಗ ಮತ್ತದೇ ಪ್ರಾಬ್ಲಂ ಆಗಿದೆ. ಕ್ಯಾಮರಾಗಳು ಕೊಹ್ಲಿ ಮಕ್ಕಳ ಕಡೆಗೆ ಫೋಕಸ್ ಮಾಡಬಹುದು ಎಂದು ಅವರ ಭದ್ರತಾ ಸಿಬ್ಬಂದಿಗಳು ಬಣ್ಣ ಬಣ್ಣದ ಛತ್ರಿಗಳನ್ನೇ ಹಿಡಿದು ನಿಂತಿದ್ದರು. ಛತ್ರಿಯನ್ನೇ ಕೊಹ್ಲಿ ಮಕ್ಕಳಿಗೆ ಅಡ್ಡಲಾಗಿ ಹಿಡಿದು ಅವರು ಕಾರು ಏರಿದ ಬಳಿಕವೇ ಛತ್ರಿ ಪಕ್ಕಕ್ಕಿಟ್ಟಿದ್ದಾರೆ. ಇದನ್ನು ನೋಡಿ ಕೆಲವು ನೆಟ್ಟಿಗರು ಈ ದಂಪತಿ ಮಕ್ಕಳನ್ನು ಈ ಥರಾ ಕರೆದುಕೊಂಡು ಹೋಗುವಂತೆ ಮಾಡಿದ ಪಪ್ಪಾರಾಜಿಗಳಿಗೆ ಹಿಡಿಶಾಪ ಹಾಕಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭಮನ್ ಗಿಲ್ ಗೆ ಅನಾರೋಗ್ಯ, ಬ್ಲಡ್ ರಿಪೋರ್ಟ್ ಬಿಸಿಸಿಐಗೆ ಸಲ್ಲಿಸಿದ ಗಿಲ್

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಜೆರ್ಸಿಗೆ ಪ್ರಾಯೋಜಕರೇ ಇರಲ್ವಾ

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments