ಭಾರತ-ಆಸ್ಟ್ರೇಲಿಯಾ ಏಕದಿನ: ಕೊನೆಯ ಓವರ್ ಮತ್ತು ವಿಜಯ್ ಶಂಕರ್ ಮ್ಯಾಜಿಕ್!

Webdunia
ಬುಧವಾರ, 6 ಮಾರ್ಚ್ 2019 (08:44 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 8 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.


ಇದಕ್ಕೆ ಕಾರಣವಾಗಿದ್ದು, ಟೀಂ ಇಂಡಿಯಾ ಬೌಲರ್ ಗಳು. ಗೆಲುವಿಗೆ ಕೇವಲ 250 ರನ್ ಗಳ  ಗುರಿ ಬೆನ್ನತ್ತಿದ್ದ ಆಸೀಸ್ ಈ ಪಂದ್ಯವನ್ನು ಸುಲಭವಾಗಿ ಗೆದ್ದುಬಿಡುವಂತಹ ಪರಿಸ್ಥಿತಿಯಿತ್ತು. ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟಾಯಿನಿಸ್ 52 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸುವುದರಲ್ಲಿದ್ದರು.

ಆದರೆ ಈ ಹಂತದಲ್ಲಿ ನಾಯಕ ಕೊಹ್ಲಿ, ಧೋನಿ ಮತ್ತು ರೋಹಿತ್ ಶರ್ಮಾ ಜತೆಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮ ಓವರ್ ನ್ನು ಯುವ ಆಲ್ ರೌಂಡರ್ ವಿಜಯ್ ಶಂಕರ್ ಕೈಗೆ ಬಾಲ್ ಒಪ್ಪಿಸಿದರು. ವಿಜಯ್ ಶಂಕರ್ ಗೆ ಇದು ಕೇವಲ 2 ನೇ ಓವರ್ ಆಗಿತ್ತು. ಆಗ ಆಸ್ಟ್ರೇಲಿಯಾಗೆ 11 ರನ್ ಬೇಕಾಗಿತ್ತು. ಎರಡು ವಿಕೆಟ್ ಕೈಯಲ್ಲಿತ್ತು.

ಆದರೆ ಈ ಓವರ್ ನಲ್ಲಿ ನಿಯಂತ್ರಿತ ದಾಳಿ ನಡೆಸಿದ ವಿಜಯ್ ಶಂಕರ್ ಮೊದಲ ಬಾಲ್ ನಲ್ಲಿಯೇ ಸೆಟ್ ಆಗಿದ್ದ ಸ್ಟಾಯಿನಿಸ್ ವಿಕೆಟ್ ಪಡೆದರು. ನಂತರದ ಬಾಲ್ ನಲ್ಲಿ ಆಸೀಸ್ ಎರಡು ರನ್ ಗಳಿಸಿತು. ಆದರೆ ಇನ್ನೂ ಗೆಲುವಿಗೆ 9 ರನ್ ಬೇಕಾಗಿತ್ತು. ಆದರೆ ನಂತರದ ಎಸೆತದಲ್ಲಿಯೇ ವಿಜಯ್ ಶಂಕರ್ ಆಡಂ ಜಂಪಾರನ್ನು ಬೌಲ್ಡ್ ಮಾಡುವುದರ ಮೂಲಕ ಭಾರತದ ಗೆಲುವನ್ನು ಖಾತ್ರಿ ಮಾಡಿದರು. ಆಸ್ಟ್ರೇಲಿಯಾ 49.2 ಓವರ್ ಗಳಲ್ಲಿ 242 ಕ್ಕೆ ಆಲೌಟ್ ಆಯಿತು. ಇದರೊಂದಿಗೆ ಭಾರತಕ್ಕೆ ಸರಣಿಯಲ್ಲಿ 2-0 ಮುನ್ನಡೆ ಲಭಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಕಿರೀಟ ಜಯಿಸಿದ ಭಾರತ

IND vs SA: ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ರಾಹುಲ್‌ಗೆ ಒಲಿದ ನಾಯಕತ್ವ

IND vs SA 2nd Test: ಹರಿಣ ಪಡೆಯ ಬಾಲಂಗೋಚಿಗಳ ಆಟಕ್ಕೆ ಸುಸ್ತಾದ ಭಾರತದ ಬೌಲರ್‌ಗಳು

ಸ್ಮೃತಿ ಮಂಧಾನ ಮದುವೆ ದಿಡೀರ್ ಮುಂದೂಡಿಕೆ: ಕಾರಣ ಶಾಕಿಂಗ್

Australian Open: ದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಕಿರೀಟ ಗೆದ್ದ ಲಕ್ಷ್ಯ ಸೇನ್

ಮುಂದಿನ ಸುದ್ದಿ
Show comments