Select Your Language

Notifications

webdunia
webdunia
webdunia
webdunia

ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಗೆಲುವಿನ ನಿಜವಾದ ಹೀರೋ ಈ ವ್ಯಕ್ತಿ! ಇವರು ಯಾರು ಗೊತ್ತಾ?

ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಗೆಲುವಿನ ನಿಜವಾದ ಹೀರೋ ಈ ವ್ಯಕ್ತಿ! ಇವರು ಯಾರು ಗೊತ್ತಾ?
ಅಡಿಲೇಡ್ , ಗುರುವಾರ, 3 ನವೆಂಬರ್ 2022 (08:50 IST)
WD
ಅಡಿಲೇಡ್: ಟಿ20 ವಿಶ್ವಕಪ್ ನಲ್ಲಿ ನಿನ್ನೆ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ರೋಚಕವಾಗಿ ಗೆಲುವು ಸಾಧಿಸಿತ್ತು. ಮಳೆಯಿಂದಾಗಿ ಓವರ್ ಕಡಿತಗೊಂಡಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತ್ತು.

ಈ ಗೆಲುವಿನ ನಿಜವಾದ ರೂವಾರಿಗಳು ಕೇವಲ ಆಟಗಾರರಲ್ಲ. ಟೀಂ ಇಂಡಿಯಾದ ಈ ಸಹಾಯಕ ಸಿಬ್ಬಂದಿಯ ಶ್ರಮವೂ ಆಟಗಾರರ ಯಶಸ್ಸಿಗೆ ಕಾರಣವಾಗಿದೆ.

ರಘು ಎಂಬ ಥ್ರೋ ಡೌನ್ ಸಿಬ್ಬಂದಿ ನಿನ್ನೆ ಮೈದಾನದ ಸುತ್ತ ಕೈಯಲ್ಲೊಂದು ಬ್ರಷ್ ಹಿಡಿದುಕೊಂಡು ಓಡಾಡುತ್ತಿದ್ದರು. ನಿನ್ನೆ ಮಳೆ ಬಂದ ಬಳಿಕ ಆಟಗಾರರಿಗೆ ಮೈದಾನದಲ್ಲಿ ಓಡಾಡುವುದು ಕಷ್ಟವಾಗಿತ್ತು. ಮೈದಾನ ಒದ್ದೆಯಾಗಿದ್ದರಿಂದ ಶೂ ಕೊಳೆಯಾಗಿ ಜಾರುವ ಪರಿಸ್ಥಿತಿಯಿತ್ತು. ಹೀಗಾಗಿ ರಘು ಎಂಬ ಈ ಸಹಾಯಕ ಸಿಬ್ಬಂದಿ ಬ್ರಷ್ ಹಿಡಿದುಕೊಂಡು ಪದೇ ಪದೇ ಆಟಗಾರರ ಶೂ ಕೊಳೆ ನಿವಾರಿಸಿ ಆಟಗಾರರು ಜಾರಿ ಬೀಳದಂತೆ ಎಚ್ಚರಿಕೆ ವಹಿಸುತ್ತಿದ್ದರು. ಸಹಾಯಕ ಸಿಬ್ಬಂದಿಯ ಈ ಶ್ರಮವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗೆ ವಿರಾಟ್ ಕೊಹ್ಲಿ ಕ್ಲಾಸ್