Select Your Language

Notifications

webdunia
webdunia
webdunia
webdunia

ಇಂದು ಸಂಜೆ ಭಾರತಕ್ಕೆ ವಿಮಾನವೇರಲಿದೆ ವಿಶ್ವ ವಿಜೇತ ಟೀಂ ಇಂಡಿಯಾ

Team India

Krishnaveni K

ಬಾರ್ಬಡೋಸ್ , ಮಂಗಳವಾರ, 2 ಜುಲೈ 2024 (16:11 IST)
ಬಾರ್ಬಡೋಸ್: ಟಿ20 ವಿಶ್ವಕಪ್ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿರುವ ಟೀಂ ಇಂಡಿಯಾಕ್ಕೆ ತವರಿಗೆ ವಾಪಸಾಗಲು ಚಂಡಮಾರುತ ಅಡ್ಡಿಯಾಗಿದೆ.

ಬಾರ್ಬಡೋಸ್ ನಲ್ಲಿ ಬೆರಿಲ್ ಚಂಡಮಾರುತದಿಂದಾಗಿ ಕ್ರಿಕೆಟಿಗರು ಹೋಟೆಲ್ ರೂಂನಲ್ಲಿಯೇ ಬಂಧಿಯಾಗಿದ್ದಾರೆ. ಹೊರಗೆ ಓಡಾಡಲೂ ಆಗದಂತಹ ಪರಿಸ್ಥಿತಿಯಿದೆ. ಬಾರ್ಬಡೋಸ್ ನಲ್ಲಿ ಚಂಡಮಾರುತದಿಂದಾಗಿ ತುರ್ತು ಪರಿಸ್ಥಿತಿ ಹೇರಲಾಗಿದ್ದು, ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು.

ಹೀಗಾಗಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಎರಡು ದಿನವಾದರೂ ವಿಂಡೀಸ್ ನಿಂದ ಭಾರತಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ರೋಹಿತ್ ಶರ್ಮಾ ವಿಶ್ವಕಪ್ ಜೊತೆಗೆ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದು ಬಿಟ್ಟರೆ ಬಹುತೇಕ ಕ್ರಿಕೆಟಿಗರು ಹೋಟೆಲ್ ರೂಂನಲ್ಲಿಯೇ ಕಾಲ ಕಳೆದಿದ್ದಾರೆ.

ಇಂದು ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದ್ದು, ಟೀಂ ಇಂಡಿಯಾ ಕ್ರಿಕೆಟಿಗರು ಇಂದು ಸಂಜೆ ಭಾರತದತ್ತ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ನಾಳೆ ಟೀಂ ಇಂಡಿಯಾ ಕ್ರಿಕೆಟಿಗರು ಭಾರತಕ್ಕೆ ತಲುಪುವ ನಿರೀಕ್ಷೆಯಿದೆ. ವಿಶ್ವ ವಿಜೇತ ತಂಡವನ್ನು ಎದುರಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆಲುವಿನ ಬಳಿಕ ಹುಲ್ಲು ತಿಂದಿದ್ದೇಕೆ ರಿವೀಲ್ ಮಾಡಿದ ರೋಹಿತ್ ಶರ್ಮಾ