ಮಂದ ಬೆಳಕಿನ ನಡುವೆ ಟೀಂ ಇಂಡಿಯಾ ಪರದಾಟ

Webdunia
ಶನಿವಾರ, 18 ನವೆಂಬರ್ 2017 (16:15 IST)
ಕೋಲ್ಕೊತ್ತಾ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೂರನೇ ದಿನದಾಟವೂ ಮಂದ ಬೆಳಕಿನ ಕಾರಣದಿಂದ ನಿಗದಿತ ಸಮಯಕ್ಕಿಂತ ಮೊದಲೇ ಮುಕ್ತಾಯಗೊಂಡಿದೆ.
 

ಮೂರನೇ ದಿನದಂತ್ಯಕ್ಕೆ ಶ್ರೀಲಂಕಾ 4 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿದ್ದು, ಟೀಂ ಇಂಡಿಯಾದ ಮೊದಲ ಇನಿಂಗ್ಸ್ ಮೊತ್ತ ದಾಟಲು 7 ರನ್ ಗಳಷ್ಟೇ ಬಾಕಿಯಿದೆ. ದಿನದಂತ್ಯಕ್ಕೆ ಲಂಕಾ ಪರ ನಿರೋಶಾನ್ ಡಿಕ್ ವೆಲಾ 14 ಮತ್ತು ನಾಯಕ ದಿನೇಶ್ ಚಂಡಿಮಾಲ್ 13 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು.

ಭಾರತದ ಪರ ಭುವನೇಶ್ವರ್ ಕುಮಾರ್ ಮತ್ತು ಉಮೇಶ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು. ಈ ನಡುವೆ ವೇಗಿ ಮೊಹಮ್ಮದ್ ಶಮಿ ಗಾಯಗೊಂಡು ಪೆವಿಲಿಯನ್ ಗೆ ಮರಳಿದ್ದು, ಅವರ ಓವರ್ ನ್ನು ನಾಯಕ ವಿರಾಟ್ ಕೊಹ್ಲಿ ಪೂರ್ತಿಗೊಳಿಸಿದರು.

ಪಂದ್ಯ ಸಂಪೂರ್ಣವಾಗಿ ಲಂಕಾ ಹಿಡಿತದಲ್ಲಿದ್ದು, ಇನ್ನುಳಿದ ಎರಡು ದಿನ ಸಂಪೂರ್ಣ ಆಟ ನಡೆದರೆ ಭಾರತಕ್ಕೆ ಸೋಲಿನ ಭೀತಿ ಗ್ಯಾರಂಟಿ. ಹಾಗಾಗಿ ಮಂದ ಬೆಳಕು ಹೀಗೇ ಮುಂದುವರಿಯಲಿ ಎಂದು ಭಾರತ ಆಶಿಸುವಂತಾಗಿದೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB VS GT: ರಜತ್ ಪಟಿದಾರ್ ಅಬ್ಬರ, ಜಿಟಿಗೆ ಸವಾಲಿನ ಗುರಿ

RCB VS GT: ಕ್ವಾಲಿಫೈಯರ್‌ 1 ರೌಂಡ್‌ನಲ್ಲಿ ಟಾಸ್ ಸೋತ ಆರ್‌ಸಿಬಿ ಆರಂಭಿಕ ಆಘಾತ

GT VS RCB: ವಿರಾಟ್ ಕೊಹ್ಲಿ ಆರಂಭಿಕ ಆಟವೇ ಆರ್‌ಸಿಬಿ ಗೆಲುವಿಗೆ ಸುಗಮ

ವೈಭವ್ ಜೊತೆ ಫೋಟೋಗೆ ಪೋಸ್ ಕೊಡಿ ಎಂದ್ರೆ ನಾವೇನು ಫಿಲಂ ಸ್ಟಾರ್ ಅಲ್ಲ ಎಂದ ರಿಯಾನ್ ಪರಾಗ್ video

IPL 2026: ಕ್ವಾಲಿಫೈಯರ್ ಪಂದ್ಯಕ್ಕೆ ಮುನ್ನ ಆರ್ ಸಿಬಿ, ಗುಜರಾತ್ ಟೈಟನ್ಸ್ ಗೆ ಗುಡ್ ನ್ಯೂಸ್

ಮುಂದಿನ ಸುದ್ದಿ
Show comments