Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಮತ್ತೆ ಕರ್ನಾಟಕದ ಬೊಂಬಾಟ್ ಆಟ

ರಣಜಿ ಟ್ರೋಫಿ ಕ್ರಿಕೆಟ್: ಮತ್ತೆ ಕರ್ನಾಟಕದ ಬೊಂಬಾಟ್ ಆಟ
ಕಾನ್ಪುರ , ಶುಕ್ರವಾರ, 17 ನವೆಂಬರ್ 2017 (16:50 IST)
ಕಾನ್ಪುರ: ಉತ್ತರ ಪ್ರದೇಶ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಮೊದಲ ದಿನವೇ ಬೃಹತ್ ಮೊತ್ತ ಪೇರಿಸಿದೆ.
 

ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿರುವ ಕರ್ನಾಟಕ ಮತ್ತೊಂದು ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದೆ. ರಾಹುಲ್ ಸ್ಥಾನಕ್ಕೆ ಈ ಪಂದ್ಯವಾಡುತ್ತಿರುವ ದೇಗಲ್ ನಿಶ್ಚಲ್ 90 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾರೆ. ಮನೀಶ್ ಪಾಂಡೆ ಕೂಡಾ ಅರ್ಧಶತಕ (63) ಗಳಿಸಿದ್ದಾರೆ.

ಇದಕ್ಕೂ ಮೊದಲು ಆರಂಭಿಕ ಮಯಾಂಕ್ ಅಗರ್ವಾಲ್ ಮತ್ತೊಂದು ಶತಕ ದಾಖಲಿಸುವ ಸೂಚನೆ ನೀಡಿದರಾದರೂ 90 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ 62 ರನ್ ಗಳಿಸಲಷ್ಟೇ ಶಕ್ತರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯ ಕಾಟಕ್ಕೆ ಬೇಸತ್ತ ಭಾರತ-ಲಂಕಾ ಆಟಗಾರರು