ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಕ್ಕಿರುವುದು ಮೂರು ಚಿಂತೆ

Webdunia
ಶನಿವಾರ, 16 ಮಾರ್ಚ್ 2019 (09:09 IST)
ಮುಂಬೈ: ಐಪಿಎಲ್ ಬಿಟ್ಟರೆ ಕ್ರಿಕೆಟಿಗರಿಗೆ ಇನ್ನು ಉಳಿದಿರುವುದು ವಿಶ್ವಕಪ್ ಕೂಟ ಒಂದೇ. ಮಹತ್ವದ ಕೂಟಕ್ಕೆ ತಯಾರಾಗುತ್ತಿರುವ ಟೀಂ ಇಂಡಿಯಾಗೆ ಉಳಿದಿರುವುದು ಮೂರು ಚಿಂತೆ.


ಆರಂಭಿಕರ ಅಸ್ಥಿರತೆ
ಮೊದಲನೆಯದಾಗಿ ಟೀಂ ಇಂಡಿಯಾಗಿರುವ ದೊಡ್ಡ ತಲೆನೋವು ಆರಂಭಿಕರದ್ದು. ಆರಂಭಿಕರು ಒಂದು ಪಂದ್ಯದಲ್ಲಿ ಆಡಿದರೆ ಇನ್ನೊಂದು ಪಂದ್ಯದಲ್ಲಿ ಆಡುತ್ತಿಲ್ಲ. ಇದರಿಂದಾಗಿ ಭಾರತಕ್ಕೆ ಸ್ಥಿರ ಆರಂಭ ಸಿಗುತ್ತಿಲ್ಲ. ರೋಹಿತ್ ಶರ್ಮಾ, ಶಿಖರ್ ಧವನ್ ಫಾರ್ಮ್ ಅಸ್ಥಿರತೆಯೇ ಭಾರತಕ್ಕೆ ದೊಡ್ಡ ಚಿಂತೆಯಾಗಿದೆ.

ನಂ.4 ಚಿಂತೆ
ಬ್ಯಾಟಿಂಗ್ ಬಲಗೊಳ್ಳಬೇಕೆಂದರೆ ಮಧ್ಯಮ ಕ್ರಮಾಂಕ ಬಲಗೊಳ್ಳಬೇಕು. ಆದರೆ ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕಕ್ಕೆ ಸ್ಥಿರವಾದ, ನಿಂತು ಆಡುವ ಆಟಗಾರ ಸಿಗುತ್ತಿಲ್ಲ. ಇದುವರೆಗಿನ ಟೂರ್ನಿಯಲ್ಲಿ ಹಲವು ಆಟಗಾರರನ್ನು ಈ ಕ್ರಮಾಂಕದಲ್ಲಿ ಆಡಿಸಿ ಪ್ರಯೋಗ ಮಾಡಿಸಲಾಯಿತಾದರೂ ಅದರಿಂದ ಪ್ರಯೋಜನವಾಗಿಲ್ಲ. ಈ ಬಗ್ಗೆ ಸ್ವತಃ ನಾಯಕ ಕೊಹ್ಲಿ ಕೂಡಾ ಆಸ್ಟ್ರೇಲಿಯಾ ಸರಣಿ ಬಳಿಕ ಕಳವಳದಿಂದ ಮಾತನಾಡಿದ್ದಾರೆ. ಈ ಒಂದು ಸ್ಥಾನ ಭರ್ತಿ ಮಾಡುವ ಬಗ್ಗೆಯೇ ಚರ್ಚೆ ನಡೆಯುತ್ತಿರುವುದಾಗಿ ಹೇಳಿದ್ದಾರೆ.

ಆಲ್ ರೌಂಡರ್
ಆಲ್ ರೌಂಡರ್ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಿಜಯ್ ಶಂಕರ್ ನಡುವೆ ಪೈಪೋಟಿಯಿದೆ. ಆದರೆ ಅಂತಿಮವಾಗಿ ಈ ಸ್ಥಾನ ಯಾರ ಪಾಲಾಗಬೇಕು ಎನ್ನುವುದೇ ಟೀಂ ಇಂಡಿಯಾ ತಲೆನೋವು. ಪಾಂಡ್ಯ ಆಗಾಗ ಗಾಯಕ್ಕೊಳಗಾಗುತ್ತಿದ್ದರೆ, ಇತ್ತ ವಿಜಯ್  ಶಂಕರ್ ಇನ್ನೂ ಪಕ್ವವಾಗಿಲ್ಲ. ರವೀಂದ್ರ ಜಡೇಜಾ ಇಂಗ್ಲೆಂಡ್ ಪಿಚ್ ಗಳಲ್ಲಿ ಉಪಯೋಗಕ್ಕೆ ಬರುತ್ತಾರೋ ಎಂಬುದು ಸ್ಪಷ್ಟವಿಲ್ಲ. ಹೀಗಾಗಿ ಆಲ್ ರೌಂಡರ್ ಸ್ಥಾನ ತಲೆನೋವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಗಾಗಿ ಸೂರ್ಯ ಕುಮಾರ್ ಯಾದವ್ ತಾಯಿ ಪೂಜೆ: ಎಂಥಾ ಅನುಬಂಧ

IND vs AUS T20: ಮಳೆಗೆ ಕೊಚ್ಚಿ ಹೋದ ಮೊದಲ ಟಿ20

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಶ್ರೇಯಸ್ ಅಯ್ಯರ್ ನಿಂದ ಸದ್ಯದಲ್ಲೇ ಸಿಗಲಿದೆ ಸರ್ಪೈಸ್: ಬಿಸಿಸಿಐ

ಮುಂದಿನ ಸುದ್ದಿ
Show comments