ರಿಷಬ್ ಜೀವವುಳಿಸಿದ ಬಸ್ ಡ್ರೈವರ್ ಸುಶೀಲ್ ಕುಮಾರ್ ಗೆ ಎಲ್ಲೆಡೆ ಮೆಚ್ಚುಗೆ

Webdunia
ಶನಿವಾರ, 31 ಡಿಸೆಂಬರ್ 2022 (09:30 IST)
Photo Courtesy: Twitter
ನವದೆಹಲಿ: ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಜೀವವುಳಿಸಿದ್ದು ಹರ್ಯಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಸುಶೀಲ್ ಕುಮಾರ್.

ಉರಿಯುತ್ತಿದ್ದ ಕಾರಿನೊಳಗೆ ಸಿಲುಕಿದ್ದ ರಿಷಬ್ ಹೊರ ಬರಲಾಗದೇ ಹೋಗಿದ್ದರೆ ಕತೆಯೇ ಬೇರೆಯಾಗುತ್ತಿತ್ತು. ಆದರೆ ಅದೃಷ್ಟವಶಾತ್ ಅದೇ ಸಮಯಕ್ಕೆ ಸುಶೀಲ್ ಕುಮಾರ್ ರಿಷಬ್ ರನ್ನು ಕಾಪಾಡಿದ್ದರು.

ಉರಿಯುತ್ತಿದ್ದ ಕಾರಿನಿಂದ ರಿಷಬ್ ರನ್ನು ಹೊರಗೆಳೆದು ಬೆಡ್ ಶೀಟ್ ಮೈಗೆ ಸುತ್ತಿ ಬೆಂಕಿಯಿಂದ ಕಾಪಾಡಿದ್ದರು. ಬಳಿಕ ಆಂಬ್ಯುಲೆನ್ಸ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುಶೀಲ್ ಸಮಯಪ್ರಜ್ಞೆಯಿಂದ ರಿಷಬ್ ಪ್ರಾಣ ಉಳಿದಿದೆ. ಹೀಗಾಗಿ ಈಗ ಸುಶೀಲ್ ರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಹರ್ಯಾಣ ರಾಜ್ಯ ಸಾರಿಗೆ ಸಂಸ್ಥೆ ಅವರನ್ನು ಸನ್ಮಾನಿಸಿದೆ. ಎನ್ ಸಿಎ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಸುಶೀಲ್ ರನ್ನು ಕೊಂಡಾಡಿದ್ದು, ನಿಮ್ಮ ನಿಸ್ವಾರ್ಥ ಸಹಾಯಕ್ಕೆ ನಾವು ಎಂದೆಂದಿಗೂ ಚಿರ ಋಣಿಯಾಗಿರಬೇಕು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟಿಮ್ ಡೇವಿಡ್ ಮೈದಾನದಾಚೆ ಹೊಡೆದ ಬಾಲ್ ಹುಡುಕಿ ಪಡೆದ ಫ್ಯಾನ್ಸ್ ಯಾರು ನೋಡಿ Video

IPL 2026: ಸಿಎಸ್ ಕೆ ವಿರುದ್ಧ ಗೆದ್ದು ಆರ್ ಸಿಬಿ ಗುಡ್ಡೆ ಹಾಕಿದ ದಾಖಲೆಗಳ ಪಟ್ಟಿ ಇಲ್ಲಿದೆ

IPL 2026: ಸಿಎಸ್‌ಕೆ ವಿರುದ್ಧ ಗೆದ್ದು ಬೀಗಿದ ಆರ್‌ಸಿಬಿ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೆ

ಆರ್‌ಸಿಬಿ ವಿರುದ್ಧ ಬ್ಯಾಟಿಂಗ್‌ಗೆ ಇಳಿದ್ರೆ ಎಂಎಸ್‌ ಧೋನಿಗೆ ಎಂ ಚಿನ್ನಸ್ವಾಮಿಯಲ್ಲಿ ಇದೇ ಕೊನೆ ಪಂದ್ಯಾಟವಾಗುತ್ತಾ

ಐಪಿಎಲ್‌ ಟಿಕೆಟ್‌ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ: ಆರ್‌ಸಿಬಿ ಅಭಿಮಾನಿ ಟೆಕ್ಕಿಗೆ ಪಂಗನಾಮ

ಮುಂದಿನ ಸುದ್ದಿ
Show comments