Publish Date: Sat, 31 Dec 2022 (09:10 IST)
Updated Date: Sat, 31 Dec 2022 (09:20 IST)
ಮುಂಬೈ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಸಂಜು ಸ್ಯಾಮ್ಸನ್ ಹೆಸರನ್ನು ಕೈ ಬಿಡಲು ಕಾರಣ ನಾಯಕ ರೋಹಿತ್ ಶರ್ಮಾ ಎನ್ನಲಾಗುತ್ತಿದೆ.
ಬಿಸಿಸಿಐ ಮೂಲಗಳ ಪ್ರಕಾರ ಏಕದಿನ ಸರಣಿಗೆ ಕೆಎಲ್ ರಾಹುಲ್ ಬದಲು ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಲು ಆಯ್ಕೆಗಾರರು ಬಯಸಿದ್ದರು. ಆದರೆ ಕ್ಯಾಪ್ಟನ್ ರೋಹಿತ್ ಶರ್ಮಾ ಅಭಿಪ್ರಾಯಕ್ಕೆ ಮಣಿದು ಆಯ್ಕೆಗಾರರು ಸಂಜು ಕೈ ಬಿಟ್ಟು ರಾಹುಲ್ ಗೆ ಅವಕಾಶ ನೀಡಿದರು ಎನ್ನಲಾಗಿದೆ.
ಹೀಗಾಗಿ ಸಂಜು ಸ್ಯಾಮ್ಸನ್ ರನ್ನು ಕೇವಲ ಟಿ20 ತಂಡಕ್ಕೆ ಮಾತ್ರ ಆಯ್ಕೆ ಮಾಡಲಾಗಿದೆ. ಪದೇ ಪದೇ ಪ್ರತಿಭಾವಂತ ಸಂಜು ಸ್ಯಾಮ್ಸನ್ ರನ್ನು ಡ್ರಾಪ್ ಮಾಡುವುದು, ತಂಡಕ್ಕೆ ಆಯ್ಕೆ ಮಾಡಿದರೂ ಆಡುವ ಅವಕಾಶ ನೀಡದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.