Publish Date: Thu, 13 Apr 2023 (08:50 IST)
Updated Date: Thu, 13 Apr 2023 (08:51 IST)
ಮುಂಬೈ: ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಸಂಕಷ್ಟದಲ್ಲಿದೆ. ಕಳೆದ ಏಳು ಇನಿಂಗ್ಸ್ ಗಳ ಪೈಕಿ ನಾಲ್ಕು ಬಾರಿ ಗೋಲ್ಡನ್ ಡಕ್ ಆಗಿದ್ದಾರೆ.
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್, ಏಕದಿನ ವಿಶ್ವಕಪ್ ಗೆ ತಂಡ ಆಯ್ಕೆ ಮಾಡುವ ಮಹತ್ವದ ಸಂದರ್ಭ. ಈಗ ಸೂರ್ಯ ಫಾರ್ಮ್ ಕಳೆದುಕೊಂಡಿರುವುದು ಅವರ ಭವಿಷ್ಯಕ್ಕೆ ಕುತ್ತಾಗಲಿದೆ.
ಶಿಖರ್ ಧವನ್, ಅಜಿಂಕ್ಯಾ ರೆಹಾನೆ ಐಪಿಎಲ್ ನಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ. ಅವರ ಜೊತೆಗೆ ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ ವಾಡ್ ಮುಂತಾದ ಬ್ಯಾಟಿಗರು ಲೈನನಲ್ಲಿದ್ದಾರೆ. ಹೀಗಿರುವಾಗ ಆಯ್ಕೆಗಾರರು ಬೇರೆ ಆಯ್ಕೆ ಬಗ್ಗೆ ಯೋಚಿಸಲೂಬಹುದು.
ಹೀಗಾಗಿ ಈ ಹಂತದಲ್ಲಿ ಸೂರ್ಯಕುಮಾರ್ ಯಾದವ್ ಭವಿಷ್ಯ ಕಾಪಾಡಬೇಕಾದರೆ ನಾಯಕ ರೋಹಿತ್ ಶರ್ಮಾನೇ ಬೇಕು. ರೋಹಿತ್, ಕೋಚ್ ರಾಹುಲ್ ದ್ರಾವಿಡ್ ಕೃಪಾಕಟಾಕ್ಷವಿದ್ದರೆ ಮಾತ್ರ ಸೂರ್ಯಗೆ ಮತ್ತೊಂದು ಅವಕಾಶ ಸಿಗಲಿದೆ.