Select Your Language

Notifications

webdunia
webdunia
webdunia
webdunia

ಸೂರ್ಯಕುಮಾರ್ ಯಾದವ್ ಕಾಲು ಟ್ವಿಸ್ಟ್: ಗಾಯದ ಬಗ್ಗೆ ಮಾಹಿತಿ ನೀಡಿದ ಕ್ಯಾಪ್ಟನ್

ಸೂರ್ಯಕುಮಾರ್ ಯಾದವ್ ಕಾಲು ಟ್ವಿಸ್ಟ್: ಗಾಯದ ಬಗ್ಗೆ ಮಾಹಿತಿ ನೀಡಿದ ಕ್ಯಾಪ್ಟನ್
ಜೊಹಾನ್ಸ್ ಬರ್ಗ್ , ಶುಕ್ರವಾರ, 15 ಡಿಸೆಂಬರ್ 2023 (12:25 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಗೆ ಗಾಯವಾಗಿದೆ.

ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿತ್ತು. ಸೂರ್ಯಕುಮಾರ್ ಯಾದವ್ ಭರ್ಜರಿ ಶತಕದ ಮೂಲಕ ತಂಡದ ಮೊತ್ತವನ್ನು 200 ರ ಗಡಿ ದಾಟಿಸುವಲ್ಲಿ ಸಫಲರಾಗಿದ್ದರು.

ಆದರೆ ಫೀಲ್ಡಿಂಗ್ ವೇಳೆ ಬೌಂಡರಿ ತಡೆಯುವ ಯತ್ನದಲ್ಲಿ ಸೂರ್ಯ ಕಾಲು ಟ್ವಿಸ್ಟ್ ಮಾಡಿಕೊಂಡಿದ್ದಾರೆ. ಬಳಿಕ ಅವರನ್ನು ಪೆವಿಲಿಯನ್ ಕರೆದೊಯ್ಯಲಾಯಿತು. ಆ ಬಳಿಕ ಸೂರ್ಯ ಮೈದಾನಕ್ಕೆ ಬರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಉಪನಾಯಕ ರವೀಂದ್ರ ಜಡೇಜಾ ತಂಡ ಮುನ್ನಡೆಸಿದರು.

ಪಂದ್ಯದ ಬಳಿಕ ತಮ್ಮ ಗಾಯದ ಬಗ್ಗೆ ಮಾಹಿತಿ ನೀಡಿದ ಸೂರ್ಯ, ‘ನಾನು ಚೆನ್ನಾಗಿದ್ದೇನೆ. ಈಗ ನಡೆದಾಡಲು ಸಾಧ್ಯವಾಗುತ್ತಿದೆ. ಗೆಲುವಿಗಾಗಿ ಈ ರೀತಿಯ ಪ್ರಯತ್ನಗಳನ್ನು ಮಾಡುವುದು ನನಗೆ ಯಾವತ್ತಿಗೂ ಖುಷಿಕೊಡುತ್ತದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆರ್ಸಿ ನಂಬರ್ 7 ಯಾರೂ ಧರಿಸಬಾರದು! ಕ್ರಿಕೆಟಿಗರಿಗೆ ಬಿಸಿಸಿಐ ಖಡಕ್ ಸೂಚಿಸಿದ್ದು ಯಾಕೆ?