ಐಯಾಮ್ ಸಾರಿ ಎನ್ನುತ್ತಾ ಗಳ ಗಳನೆ ಅತ್ತ ಸ್ಟೀವ್ ಸ್ಮಿತ್

Webdunia
ಶುಕ್ರವಾರ, 30 ಮಾರ್ಚ್ 2018 (09:14 IST)
ಸಿಡ್ನಿ: ಚೆಂಡು ವಿರೂಪ ಪ್ರಕರಣದಿಂದ ಇದುವರೆಗೆ ಗಳಿಸಿದ ಗೌರವ ಕಳೆದುಕೊಂಡ ಭಾವದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ಕ್ಷಮೆ ಕೇಳುತ್ತಾ ಗಳ ಗಳನೆ ಅತ್ತು ಬಿಟ್ಟಿದ್ದಾರೆ.

ಜೊಹಾನ್ಸ್ ಬರ್ಗ್ ನಿಂದ ಸಿಡ್ನಿಗೆ ಬಂದಿಳಿದ ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಅಷ್ಟೇ ಅಲ್ಲ, ಇದು ತನ್ನ ನಾಯಕತ್ವದ ದೊಡ್ಡ ವೈಫಲ್ಯ ಎಂದು ಪಶ್ಚಾತ್ತಾಪದ ಶಬ್ಧ ಹೇಳಿದ್ದಾರೆ.

‘ನಿಜವಾಗಲೂ ನನಗೆ ಅತೀವ ದುಃಖವಾಗುತ್ತಿದೆ.ನನ್ನ ತಪ್ಪು ಸರಿ ಮಾಡುವಂತಹ ಯಾವುದೇ ದಾರಿಯಿದ್ದರೂ ಅದನ್ನು ಮಾಡಕ್ಕೆ ನಾನು ಸಿದ್ಧನಿದ್ದೇನೆ. ಇದು ಮುಂಬರುವ ಜನಾಂಗಕ್ಕೆ ಪಾಠವಾಗಲಿ. ಕ್ರಿಕೆಟ್ ಎಂಬ ಗ್ರೇಟ್ ಆಟವನ್ನು ನಾನು ತುಂಬಾ ಇಷ್ಟಪಡುತ್ತೇನೆ. ಈ ಆಟದ ಮೂಲಕ ಪ್ರತಿಯೊಬ್ಬರನ್ನೂ ಮನರಂಜಿಸಲು ನನಗೆ ತುಂಬಾ ಇಷ್ಟ. ಆದರೆ ನನ್ನ ತಪ್ಪಿನಿಂದಾಗಿ ಇಡೀ ಆಸ್ಟ್ರೇಲಿಯಾವೇ ಅವಮಾನ ಪಡುವಂತಾಗಿದ್ದಕ್ಕೆ ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಹೇಳುತ್ತಾ ಸ್ಮಿತ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅತ್ತ ಡೇವಿಡ್ ವಾರ್ನರ್, ಬ್ಯಾನ್ ಕ್ರಾಫ್ಟ್ ಕೂಡಾ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಆದರೆ ಇದರಿಂದ ಆದ ನಷ್ಟವನ್ನು ತುಂಬಲು ಸಾಧ್ಯವೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅರ್ಷ್ ದೀಪ್ ಸಿಂಗ್ ಹೇಗೆ ಓಡ್ತಾರೆ... ವಿರಾಟ್ ಕೊಹ್ಲಿ ಅನುಕರಣೆ ನೋಡಿದ್ರೆ ನಗೋದು ಗ್ಯಾರಂಟಿ Video

IND vs NZ: ಭಾರತ ವರ್ಸಸ್ ನ್ಯೂಜಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ, ಎಲ್ಲಿ ಲೈವ್ ವೀಕ್ಷಿಸಬೇಕು

ಆರ್ ಸಿಬಿ ಅಂದ್ರೇನೇ ಥ್ರಿಲ್ಲರ್: ಗೆಲುವಿನ ಬಳಿಕ ಸ್ಮೃತಿ ಮಂಧಾನ ಹೇಳಿಕೆ ವೈರಲ್

ಏನಪ್ಪಾ ಪ್ರಾಕ್ಟೀಸ್ ಮಾಡಕ್ಕೂ ಬಿಡಲ್ವಾ: ಕ್ಯಾಮರಾಮ್ಯಾನ್ ಮೇಲೆ ಸಿಟ್ಟಾದ ಸ್ಮೃತಿ ಮಂಧಾನ Video

WPL 2026: ಮುಂಬೈ ಬೌಲರ್ ಕೊನೆಯ ಎಸೆತದಲ್ಲಿ ಮಾಡಿದ ತಪ್ಪಿನ ಲಾಭ ಪಡೆದ ನಡಿನ್ ಡಿ ಕ್ಲರ್ಕ್ Video

ಮುಂದಿನ ಸುದ್ದಿ
Show comments