Select Your Language

Notifications

webdunia
webdunia
webdunia
webdunia

ಮಾಗದ ಗಾಯ: ಹೋಟೆಲ್ ನಲ್ಲೇ ಉಳಿದುಕೊಂಡ ಶ್ರೇಯಸ್ ಅಯ್ಯರ್

ಮಾಗದ ಗಾಯ: ಹೋಟೆಲ್ ನಲ್ಲೇ ಉಳಿದುಕೊಂಡ ಶ್ರೇಯಸ್ ಅಯ್ಯರ್
ಕೊಲೊಂಬೊ , ಮಂಗಳವಾರ, 12 ಸೆಪ್ಟಂಬರ್ 2023 (17:22 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ವೇಳೆಗೆ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ ಶ್ರೇಯಸ್ ಅಯ್ಯರ್ ಮತ್ತೆ ಗಾಯಕ್ಕೊಳಗಾಗಿದ್ದು, ಅವರ ಗಾಯದ ಬಗ್ಗೆ ಬಿಸಿಸಿಐ ಲೇಟೆಸ್ಟ್ ಅಪ್ ಡೇಟ್ ನೀಡಿದೆ.

ಬೆನ್ನು ನೋವಿನಿಂದ ಚೇತರಿಸಿಕೊಂಡು ಹಲವು ದಿನಗಳ ಬಳಿಕ ತಂಡಕ್ಕೆ ಮರಳಿದ್ದ ಶ್ರೇಯಸ್ ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದರೂ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ವಿಪರ್ಯಾಸವೆಂದರೆ ಅವರು ಮತ್ತೆ ಬೆನ್ನು ನೋವಿಗೊಳಗಾಗಿದ್ದು ಪಾಕ್ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಆಡಿರಲಿಲ್ಲ.

ಇಂದು ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಸೂಪರ್ ಫೋರ್ ಪಂದ್ಯದ ವೇಳೆ ಅವರು ತಂಡದ ಜೊತೆಗೆ ಪ್ರಯಾಣಿಸದೇ ಹೋಟೆಲ್ ನಲ್ಲೇ ಉಳಿದುಕೊಂಡಿದ್ದಾರೆ. ಸದ್ಯಕ್ಕೆ ಅವರು ಚೇತರಿಸಿಕೊಳ್ಳುತ್ತಿದ್ದು, ವೈದ್ಯಕೀಯ ತಂಡದ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಕ್ರಿಕೆಟ್: ಕೆಎಲ್ ರಾಹುಲ್ ಔಟ್, ಮತ್ತೆ ಸಂಕಷ್ಟದಲ್ಲಿ ಟೀಂ ಇಂಡಿಯಾ