Select Your Language

Notifications

webdunia
webdunia
webdunia
webdunia

ತಂಡಕ್ಕೆ ಆಯ್ಕೆಯಾಗದ ಆಕ್ರೋಶ ಈ ರೀತಿ ತೀರಿಸಿಕೊಂಡ ಶ್ರಾದ್ಧೂಲ್ ಠಾಕೂರ್

ತಂಡಕ್ಕೆ ಆಯ್ಕೆಯಾಗದ ಆಕ್ರೋಶ ಈ ರೀತಿ ತೀರಿಸಿಕೊಂಡ ಶ್ರಾದ್ಧೂಲ್ ಠಾಕೂರ್
ಮುಂಬೈ , ಭಾನುವಾರ, 25 ಡಿಸೆಂಬರ್ 2022 (09:10 IST)
ಮುಂಬೈ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡೂ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದೇ ಇರುವುದು ವೇಗಿ ಶ್ರಾದ್ಧೂಲ್ ಠಾಕೂರ್ ಬೇಸರಕ್ಕೆ ಕಾರಣವಾಗಿದೆ.

ಶ್ರಾದ್ಧೂಲ್ ಠಾಕೂರ್ ಗೆ ಮೊದಲ ಟೆಸ್ಟ್ ನಲ್ಲೂ ಅವಕಾಶ ಸಿಕ್ಕಿರಲಿಲ್ಲ. ಎರಡನೇ ಪಂದ್ಯದಲ್ಲಿ ಮೊದಲ ಪಂದ್ಯದ ಹೀರೋ ಕುಲದೀಪ್ ಯಾದವ್ ರನ್ನು ಹೊರಗಿಟ್ಟು ಜಯದೇವ್ ಉನಾದ್ಕಟ್ ಗೆ ಅವಕಾಶ ನೀಡಲಾಗಿದೆ. ಹೀಗಾಗಿ ಶ್ರಾದ್ಧೂಲ್ ಗೆ ಈ ಪಂದ್ಯದಲ್ಲೂ ಅವಕಾಶ ಸಿಗಲಿಲ್ಲ.

ಈ ಬೇಸರವನ್ನು ಅವರು ಟ್ವಿಟರ್ ನಲ್ಲಿ ಹೊರಹಾಕಿದ್ದಾರೆ. ಟೀಂ ಇಂಡಿಯಾ ಆಯ್ಕೆ ಟ್ವಿಟರ್ ಟ್ರೆಂಡ್ ಗೆ ಅನುಗುಣವಾಗಿ ನಡೆಯುತ್ತದೆ ಎಂದು ಯಾರೋ ಟಾಂಗ್ ಕೊಟ್ಟಿರುವ ಟ್ವೀಟ್ ಗೆ ಶ್ರಾದ್ಧೂಲ್ ಲೈಕ್ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಬೇಸರ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಟಕ್ಕುಂಟು ಲೆಕ್ಕಕ್ಕಿಲ್ಲದ ಕೆಎಲ್ ರಾಹುಲ್ ರನ್ನು ತಂಡದಿಂದ ಕಿತ್ತು ಹಾಕಿ!