Select Your Language

Notifications

webdunia
webdunia
webdunia
webdunia

ನಾಯಕನಾಗಿದ್ದ ನನ್ನ ತಂಡದಿಂದಲೇ ಕಿತ್ತು ಹಾಕಿದ್ರು: ಶಿಖರ್ ಧವನ್

ನಾಯಕನಾಗಿದ್ದ ನನ್ನ ತಂಡದಿಂದಲೇ ಕಿತ್ತು ಹಾಕಿದ್ರು: ಶಿಖರ್ ಧವನ್
ಮುಂಬೈ , ಭಾನುವಾರ, 9 ಏಪ್ರಿಲ್ 2023 (09:10 IST)
Photo Courtesy: Twitter
ಮುಂಬೈ: ಒಂದು ಕಾಲದಲ್ಲಿ ಟೀಂ ಇಂಡಿಯಾ ನಾಯಕನಾಗಿಯೂ ಕರ್ತವ್ಯ ನಿರ್ವಹಿಸಿದ್ದ ಶಿಖರ್ ಧವನ್ ಗೆ ಇಂದು ತಂಡದಲ್ಲೇ ಸ್ಥಾನವಿಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಧವನ್, ನಾನು ಇದನ್ನು ಕೊರತೆ ಎಂದು ಭಾವಿಸಿಲ್ಲ. ಎಲ್ಲದಕ್ಕೂ ಒಂದು ಕಾರಣವಿದೆ. ದೇವರು ಏನೇ ಮಾಡಿದರೂ ನಮಗೆ ಮುಂದೆ ಒಳ್ಳೆಯದಕ್ಕೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

‘ಒಂದು ಕಾಲದಲ್ಲಿ ತಂಡದ ನಾಯಕನಾಗಿದ್ದೆ. ಆದರೆ ಒಂದೆರಡು ಸರಣಿಗಳಲ್ಲಿ ನಾನು ಪರ್ಫಾರ್ಮ್ ಮಾಡದೇ ಇದ್ದಾಗ ತಂಡದಿಂದ ಕಿತ್ತು ಹಾಕಿದ್ರು. ಈಗ ನನ್ನ ಸ್ಥಾನಕ್ಕೆ ಶುಬ್ಮನ್ ಗಿಲ್ ಬಂದಿದ್ದಾರೆ. ಅವರು ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಇದಕ್ಕೆ ನಾನು ಕೊರಗುತ್ತಿಲ್ಲ’ ಎಂದಿದ್ದಾರೆ ಧವನ್.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಹೈದರಾಬಾದ್ ಎದುರಾಳಿ