Webdunia - Bharat's app for daily news and videos

Install App

ನನ್ನಿಂದಾಗಿಯೇ ಐಪಿಎಲ್ ಉಳಿಯಿತು ಎಂದು ಸೆಹ್ವಾಗ್ ಹೇಳಿದ್ದೇಕೆ?!

Webdunia
ಶನಿವಾರ, 21 ಏಪ್ರಿಲ್ 2018 (10:33 IST)
ಮೊಹಾಲಿ: ಈ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಆಗಿರುವ ವೀರೇಂದ್ರ ಸೆಹ್ವಾಗ್ ಹರಾಜು ಪ್ರಕ್ರಿಯೆಯಲ್ಲೂ ತಂಡದ ಪ್ರಮುಖ ಭಾಗವಾಗಿದ್ದರು. ಇದೀಗ ಈ ಐಪಿಎಲ್ ಉಳಿದಿರುವುದೇ ತನ್ನಿಂದ ಎಂದು ಹೇಳಿಕೊಂಡಿದ್ದಾರೆ.

ಸದಾ ವಿಡಂಬನಾತ್ಮಕ ಟ್ವೀಟ್ ಮಾಡುವ ಸೆಹ್ವಾಗ್ ಈ ಬಗ್ಗೆ ತಮಾಷೆಯಾಗಿ ಟ್ವೀಟ್ ಮಾಡಿದ್ದು, ಕ್ರಿಸ್ ಗೇಲ್ ಸುನಾಮಿ ಇನಿಂಗ್ಸ್ ನೋಡಿ ಈ ರೀತಿ ಟ್ವೀಟ್ ಮಾಡಿದ್ದಾರೆ.

ಈ ಆವೃತ್ತಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದ್ದಾಗ ಆರಂಭದಲ್ಲಿ ಗೇಲ್ ಯಾವುದೇ ತಂಡಕ್ಕೆ ಹರಾಜಾಗಿರಲಿಲ್ಲ. ಕೊನೆಯ ಕ್ಷಣದಲ್ಲಿ ಪಂಜಾಬ್ ಅವರನ್ನು 2 ಕೋಟಿ ರೂ.ಗೆ ತನ್ನದಾಗಿಸಿಕೊಂಡಿತು. ಇದಕ್ಕೆ ಸೆಹ್ವಾಗ್ ಸಲಹೆಯೇ ಕಾರಣವಾಗಿತ್ತಂತೆ.

ಪಂಜಾಬ್ ತಂಡಕ್ಕೆ ಬಂದ ಮೇಲೆ ಗೇಲ್ ಈ ಕೂಟದ ಮೊದಲ ಶತಕ ಗಳಿಸಿದ್ದಲ್ಲದೆ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಒಂದು ವೇಳೆ ಅವರಿಲ್ಲದೇ ಹೋಗಿದ್ದರೆ ಒಬ್ಬ ಭರ್ಜರಿ ಎಂಟರ್ ಟೈನರ್ ಇಲ್ಲದೆ ಐಪಿಎಲ್ ಸೊರಗುತ್ತಿತ್ತು. ಹಾಗಾಗಿ ನನ್ನಿಂದಾಗಿ ಅದು ತಪ್ಪಿತು ಎಂದು ಸೆಹ್ವಾಗ್ ತಮಾಷೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕ್ಯಾಚ್‌ಗಳನ್ನು ಬಿಟ್ಟು ಕೆಟ್ಟ ಗಿಲ್ ಪಡೆ, ಇಂಗ್ಲೆಂಡ್‌ಗೆ 5 ವಿಕೆಟ್‌ಗಳ ಗೆಲುವು

ENG vs IND: ಟೆಸ್ಟ್‌ ಆರಂಭಕ್ಕೂ ಮುನ್ನಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ

ದಯವಿಟ್ಟು ಎಲ್ಲ ಟೆಸ್ಟ್‌ಗಳನ್ನು ಆಡಿ: ಬೂಮ್ರಾಗೆ ಪತ್ನಿಯಲ್ಲೇ ಸಂದೇಶ ಕಳುಹಿಸಿದ ಗವಾಸ್ಕಾರ್‌, ಪೂಜಾರ

ಅದ್ಭುತ ಪ್ರದರ್ಶನ ನೀಡಿಯೂ ಕೆಎಲ್ ರಾಹುಲ್ ಗೆ ತಂಡದಲ್ಲಿ ಇಂಥಾ ಸ್ಥಾನವೇ

ಪೆವಿಲಿಯನ್ ನಲ್ಲಿ ಕೂತು ಯಾರೂ ಮಾಡದ ಕೆಲಸವೊಂದನ್ನು ಮಾಡ್ತಾರೆ ಸಾಯಿ ಸುದರ್ಶನ್

ಮುಂದಿನ ಸುದ್ದಿ
Show comments