Publish Date: Wed, 14 Nov 2018 (09:22 IST)
Updated Date: Wed, 14 Nov 2018 (09:24 IST)
ಮುಂಬೈ: ಟೀಂ ಇಂಡಿಯಾದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಟಿ20 ಸರಣಿಗೆ ಧೋನಿ ಆಯ್ಕೆಯಾಗಿಲ್ಲ. ಈ ಬೇಸರ ರೋಹಿತ್ ಶರ್ಮಾರನ್ನು ಕಾಡುತ್ತಿದೆಯಂತೆ.
ಧೋನಿ ವಿಂಡೀಸ್ ಸರಣಿಯಲ್ಲಿ ಆಡಲಿಲ್ಲ. ಮುಂದೆ ಆಸ್ಟ್ರೇಲಿಯಾ ಸರಣಿಗೂ ಅವರಿಲ್ಲ. ಅವರನ್ನು ತಂಡದಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರು ಇದ್ದಿದ್ದರೆ ತಂಡದಲ್ಲಿ ಯುವ ಆಟಗಾರರಿಗೆ ಸೂಕ್ತ ಸಲಹೆ ಕೊಡುತ್ತಿದ್ದರು. ಅವರಿಲ್ಲದೇ ಯುವ ಆಟಗಾರರು ದೊಡ್ಡ ಅವಕಾಶವನ್ನೇ ಕಳೆದುಕೊಂಡಿದ್ದಾರೆ ಎಂದು ರೋಹಿತ್ ಬೇಸರಿಸಿದ್ದಾರೆ.
‘ಧೋನಿ ಲಂಕಾ ಸರಣಿಯಲ್ಲೂ ಇರಲಿಲ್ಲ. ಧೋನಿ ಇಲ್ಲದ ತಂಡ ನಿಜಕ್ಕೂ ಶೂನ್ಯವೆನಿಸುತ್ತದೆ. ಅವರು ತಂಡದಲ್ಲಿದ್ದರೂ ಸಾಕು, ಬೇರೆ ಆಟಗಾರರಿಗೆ ಸ್ಪೂರ್ತಿ. ಆದರೆ ಸದ್ಯಕ್ಕೆ ನಮಗೆ ಇನ್ನೊಬ್ಬ ವಿಕೆಟ್ ಕೀಪರ್ ನನ್ನು ತಯಾರು ಮಾಡಬೇಕಿದೆ. ಅದಕ್ಕಾಗಿ ರಿಷಬ್ ಮತ್ತು ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರಲ್ಲಿ ಯಾರು ಸೂಕ್ತ ಎಂದು ಆಯ್ಕೆ ಮಾಡುತ್ತೇವೆ’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.