ಕ್ರಿಕೆಟಿಗ ರವೀಂದ್ರ ಜಡೇಜಾಗೆ ಕಾಡಿನಲ್ಲೇ ಗುದ್ದುವಷ್ಟು ಕೋಪ ಬಂದಿತ್ತಂತೆ ರೋಹಿತ್ ಶರ್ಮಾಗೆ!

Webdunia
ಗುರುವಾರ, 7 ಜೂನ್ 2018 (09:07 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಮೈದಾನದಲ್ಲಿ ತಾಳ್ಮೆ ಕಳೆದುಕೊಳ್ಳುವುದು ಅಪರೂಪ. ಆದರೆ ಒಮ್ಮೆ ಮಾತ್ರ ಸಹ ಕ್ರಿಕೆಟಿಗ ರವೀಂದ್ರ ಜಡೇಜಾ ಮೇಲೆ ಸಿಟ್ಟಿಗೆದ್ದು ಗುದ್ದುವಷ್ಟು ಕೋಪ ಬಂದಿತ್ತಂತೆ ರೋಹಿತ್ ಗೆ!

ಇದು ಮೈದಾನದಲ್ಲಿ ಅಲ್ಲ. ಕ್ರಿಕೆಟ್ ಸರಣಿಗಾಗಿ ದ.ಆಫ್ರಿಕಾಗೆ ತೆರಳಿದ್ದಾಗ ಜಂಗಲ್ ಸಫಾರಿ ಮಾಡಿದ್ದಾಗ ನಡೆದ ಘಟನೆ ಎಂದು ರೋಹಿತ್ ಶರ್ಮಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಈ ಸಫಾರಿಯಲ್ಲಿ ರೋಹಿತ್, ಜಡೇಜಾ ಜತೆಗೆ ಅಜಿಂಕ್ಯಾ ರೆಹಾನೆ, ಶಿಖರ್ ಧವನ್, ರೋಹಿತ್ ಪತ್ನಿ ರಿತಿಕಾ, ರೆಹಾನೆ ಪತ್ನಿ ರಾಧಿಕಾ ಕೂಡಾ ಜತೆಯಾಗಿದ್ದರಂತೆ. ‘ನಾವು ಸಫಾರಿ ಮಾಡುತ್ತಾ ಚಿರತೆಗಳು ಓಡಾಡುವ ಕಾಡಿನ ಮಧ್ಯಕ್ಕೆ ಬಂದಿದ್ದೆವು. ಅಲ್ಲಿ ಆಗಷ್ಟೇ ಬೇಟೆ ಮುಗಿಸಿ ಬಂದ ಎರಡು ಚಿರತೆಗಳಿದ್ದವು. ಚಿರತೆಗಳನ್ನು ನೋಡಿದ ತಕ್ಷಣ ಜಡೇಜಾ ಶಬ್ಧ ಮಾಡಲು ಪ್ರಾರಂಭಿಸಿದ್ದರು. ಹಾಗಾಗಿ ಅವರ ದೃಷ್ಟಿ ನಮ್ಮ ಮೇಲೆ ಬಿತ್ತು. ಆದರೆ ಅವರ ಕಣ್ಣಿಗೆ ಅದೃಷ್ಟವಶಾತ್ ನಾವು ಕಾಣಲಿಲ್ಲ. ಕಂಡಿದ್ದರೆ ನಮ್ಮ ಕತೆ ಅಲ್ಲಿಗೇ ಮುಗಿಯುತ್ತಿತ್ತು. ಈ ಸಂದರ್ಭದಲ್ಲಿ ಜಡೇಜಾಗೆ ಗುದ್ದಿ ಬರುವಷ್ಟು ಸಿಟ್ಟು ಬಂದಿತ್ತು. ಆದರೆ ಶಬ್ಧ ಮಾಡಿದ್ದರೆ ನಮ್ಮ ಕತೆ ಮುಗಿಯುತ್ತಿತ್ತು. ಅದಕ್ಕೇ ತಾಳ್ಮೆಯಿಂದ ಕೂತೆ’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್‌ ಕೊಹ್ಲಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಆಲೂರಿನಲ್ಲಿ ಕಣಕ್ಕಿಳಿಯಲಿದ್ದಾರೆ ಭಾರತದ ಸ್ಟಾರ್‌ ಬ್ಯಾಟರ್‌

ಸ್ಮೃತಿ ಮಂಧಾನ ಜೊತೆ ಮದುವೆ ಆಗುತ್ತೋ ಇಲ್ವೋ ಆತಂಕದಲ್ಲಿ ಎಲ್ಲಿ ಸೇರಿದ್ದಾರೆ ನೋಡಿ ಪಾಲಾಶ್ ಮುಚ್ಚಲ್

ಸ್ಮೃತಿ ಮಂಧಾನ ಮದುವೆ ಬಗ್ಗೆ ಕೊನೆಗೂ ಸ್ಪಷ್ಟ ನಿರ್ಧಾರ ಹೇಳಿದ ಸಹೋದರ: ಫ್ಯಾನ್ಸ್ ಶಾಕ್

ಸ್ಮೃತಿ ಮಂಧಾನ, ಪಾಲಾಶ್ ಮುಚ್ಚಲ್ ಹೊಸ ಮದುವೆ ದಿನಾಂಕ ಫಿಕ್ಸ್

ವಿವಾದಗಳ ಬೆನ್ನಲ್ಲೇ ಏರ್ ಪೋರ್ಟ್ ನಲ್ಲಿ ಆಯ್ಕೆ ಸಮಿತಿಯ ಪ್ರಗ್ಯಾನ್ ಓಝಾ ಜೊತೆ ಕೊಹ್ಲಿ ಗಂಭೀರ ಚರ್ಚೆ video

ಮುಂದಿನ ಸುದ್ದಿ
Show comments