ಬೆಂಗಳೂರು: ಯಾವಾಗ ಕಿಂಗ್ ವಿರಾಟ್ ಕೊಹ್ಲಿ ಆ ಒಂದು ಮಾತು ಹೇಳಿದ್ರೋ ಆವತ್ತಿಂದ ಆರ್ ಸಿಬಿ ಮಹಿಳೆ ಮತ್ತು ಪುರುಷರ ತಂಡದ ಅದೃಷ್ಟವೇ ಬದಲಾಗಿದೆ. ಅಷ್ಟಕ್ಕೂ ವಿರಾಟ್ ಆವತ್ತು ಹೇಳಿದ್ದೇನು ಗೊತ್ತಾ?
2024 ರ ಐಪಿಎಲ್ ಗೆ ಮೊದಲು ವಿರಾಟ್ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಕೊಹ್ಲಿ ಕನ್ನಡದಲ್ಲಿ ಇದು ಆರ್ ಸಿಬಿಯ ಹೊಸ ಅಧ್ಯಾಯ ಎಂದಿದ್ದರು.
ಯಾವಾಗ ಕೊಹ್ಲಿ ಆ ಮಾತು ಹೇಳಿದ್ರೋ ಆವತ್ತಿಂದ ಆರ್ ಸಿಬಿಯ ಅದೃಷ್ಟವೇ ಬದಲಾಗಿದೆ ಎನ್ನುತ್ತಿದ್ದಾರೆ ಫ್ಯಾನ್ಸ್. ಅದಾದ ಬಳಿಕ ಮಹಿಳೆಯರ ತಂಡ ಮೊದಲ ಬಾರಿಗೆ ಕಪ್ ಗೆದ್ದು ಬೀಗಿತ್ತು. ಇದರ ಬೆನ್ನಲ್ಲೇ ಪುರುಷರ ತಂಡವೂ ಕಳೆದ ಬಾರಿ ಮೊದಲ ಬಾರಿಗೆ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.
ಈ ಬಾರಿ ಮತ್ತೆ ಮಹಿಳಾ ತಂಡ ಮತ್ತೊಮ್ಮೆ ಚಾಂಪಿಯನ್ ಆಗುವ ಮೂಲಕ ಆರ್ ಸಿಬಿ ಫ್ರಾಂಚೈಸಿಗೆ ಹ್ಯಾಟ್ರಿಕ್ ಕಪ್ ಗೆದ್ದುಕೊಟ್ಟಿದೆ. ಇದೇ ಕಾರಣಕ್ಕೆ ಆರ್ ಸಿಬಿ ಫ್ರಾಂಚೈಸಿ ಕೂಡಾ ಕೊಹ್ಲಿಯ ಅಂದಿನ ಮಾತುಗಳ ವಿಡಿಯೋ ಹಂಚಿಕೊಂಡು ಅಲ್ಲಿಂದಲೇ ಎಲ್ಲಾ ಶುರುವಾಯ್ತು ಎಂದಿದೆ.