Select Your Language

Notifications

webdunia
webdunia
webdunia
webdunia

ಆರ್ ಸಿಬಿ ಕ್ವೀನ್ ಸ್ಮೃತಿ ಮಂದಾನಾಗೆ ಬೆಂಗಳೂರಿನ ದೋಸೆ ಬಲು ಪ್ರೀತಿ

Smrithi Mandhana

Krishnaveni K

ಬೆಂಗಳೂರು , ಗುರುವಾರ, 22 ಫೆಬ್ರವರಿ 2024 (08:30 IST)
Photo Courtesy: Twitter
ಬೆಂಗಳೂರು: ಡಬ್ಲ್ಯುಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿರುವ ಕ್ರಿಕೆಟ್ ಕ್ವೀನ್ ಸ್ಮೃತಿ ಮಂದಾನಾಗೆ ಬೆಂಗಳೂರಿನಲ್ಲಿ ಏನು ಇಷ್ಟ ಎಂದು ಆರ್ ಸಿಬಿ ಸಂದರ್ಶನದಲ್ಲಿ ಅವರೇ ಬಹಿರಂಗಪಡಿಸಿದ್ದಾರೆ.

ಡಬ್ಲ್ಯುಪಿಎಲ್ ಟೂರ್ನಿ ನಾಳೆ ಆರಂಭವಾಗಲಿದೆ. ಇದಕ್ಕೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕಿ ಸ್ಮೃತಿ ಮಂದಾನ ಜೊತೆ ಚಿಟ್ ಚ್ಯಾಟ್ ನಡೆಸಿದೆ. ಸ್ಮೃತಿಗೆ ಒಟ್ಟು 12 ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ವೇಳೆ ಬೆಂಗಳೂರಿನಲ್ಲಿ ನೀವು ಸೇವಿಸಲು ಬಯಸುವ ಆಹಾರ ಯಾವುದು ಎಂದು ಕೇಳಲಾಯಿತು. ಇದಕ್ಕೆ ಸ್ಮೃತಿ ದೋಸೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸಿಗುವ ವಿವಿಧ ವೆರೈಟಿ ದೋಸೆ ಎಂದರೆ ನನಗೆ ತುಂಬಾ ಇಷ್ಟ. ಇಲ್ಲಿಗೆ ಬಂದಾಗ ಅದನ್ನು ತಿನ್ನಲು ಇಷ್ಟಪಡುತ್ತೇನೆ ಎಂದಿದ್ದಾರೆ. ವಿಶೇಷವೆಂದರೆ ಕ್ರಿಕೆಟ್ ಕಿಂಗ್ ಕೊಹ್ಲಿ ಕೂಡಾ ಬೆಂಗಳೂರಿನ ದೋಸೆ ಪ್ರಿಯರು. ಸ್ಮೃತಿಯನ್ನು ಮಹಿಳಾ ಕ್ರಿಕೆಟ್ ನ ಕೊಹ್ಲಿ ಎಂದೇ ಪರಿಗಣಿಸಲಾಗುತ್ತದೆ. ಅವರ ಜೆರ್ಸಿ ನಂಬರ್ ಕೂಡಾ ಕೊಹ್ಲಿಯಂತೇ 18 ಆಗಿದೆ. ಇದರ ಹಿಂದಿನ ಕಾರಣವನ್ನೂ ಅವರು ಆರ್ ಸಿಬಿ ಚಿಟ್ ಚ್ಯಾಟ್ ನಲ್ಲಿ ಬಹಿರಂಗಪಡಿಸಿದ್ದಾರೆ.

ನಾನು ಭಾರತ ತಂಡಕ್ಕೆ ಬಂದಾಗ 7 ನಂಬರ್ ಚ್ಯೂಸ್ ಮಾಡಲು ಬಯಸಿದ್ದೆ. ಆದರೆ ಅದು ನನಗೆ ಸಿಗಲಿಲ್ಲ. ಆಗ ನನ್ನ ಬರ್ತ್ ಡೇ 18 ಅಲ್ವಾ. ಹಾಗಾಗಿ 18 ನಂಬರ್ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ಅಂದಿನಿಂದ 18 ನಂಬರ್ ಜೆರ್ಸಿ ತೊಡುತ್ತಿದ್ದೇನೆ ಎಂದರು.

ಇನ್ನು, ಆರ್ ಸಿಬಿ ಫ್ಯಾನ್ಸ್ ಬಗ್ಗೆ ವಿಶೇಷವಾಗಿ ಪ್ರಶ್ನೆ ಕೇಳಲಾಯಿತು. ಆಗ ಆರ್ ಸಿಬಿ ಫ್ಯಾನ್ಸ್ ಎಂದರೆ ನೆನಪಾಗುವುದೇ ವಿಧೇಯತೆ. ಬಹುಶಃ ಇಷ್ಟು ದೊಡ್ಡ ಫ್ಯಾನ್ ಬೇಸ್ ಯಾವ ತಂಡಕ್ಕೂ ಇಲ್ಲ. ನಾವು ಅದೃಷ್ಟಶಾಲಿಗಳು ಎಂದಿದ್ದಾರೆ. ಈ ಹಿಂದೊಮ್ಮೆ ಸಂದರ್ಶನದಲ್ಲಿ ಸ್ಮೃತಿ ಆರ್ ಸಿಬಿ ಅಭಿಮಾನಿಗಳು ಎಲ್ಲೇ ಹೋದರೂ ಈ ಸಲ ಕಪ್ ನಮ್ದೇ ಎನ್ನುತ್ತಾರೆ ಎಂದಿದ್ದರು. ಇದೀಗ ಮತ್ತೆ ತಮ್ಮ ಅಭಿಮಾನಿಗಳನ್ನು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗೆ ಗಂಡು ಮಗುವಾಗಿದ್ದಕ್ಕೆ ಪಾಕಿಸ್ತಾನಿಯರ ಸಂಭ್ರಮ