Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಜಗದೀಶ್ ಸುಚಿತ್ ದಾಳಿಗೆ ಬೆಚ್ಚಿಬಿದ್ದ ಸೌರಾಷ್ಟ್ರ

ರಣಜಿ ಟ್ರೋಫಿ ಕ್ರಿಕೆಟ್: ಜಗದೀಶ್ ಸುಚಿತ್ ದಾಳಿಗೆ ಬೆಚ್ಚಿಬಿದ್ದ ಸೌರಾಷ್ಟ್ರ
ರಾಜ್ ಕೋಟ್ , ಶುಕ್ರವಾರ, 7 ಡಿಸೆಂಬರ್ 2018 (10:39 IST)
ರಾಜ್ ಕೋಟ್: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಎದುರಾಳಿ ಸೌರಾಷ್ಟ್ರವನ್ನು 316 ರನ್ ಗಳಿಗೆ ಕಟ್ಟಿ ಹಾಕಿದೆ.


ಕರ್ನಾಟಕ ಪರ ಜಗದೀಶ್ ಸುಚಿತ್ 6 ವಿಕೆಟ್ ಕಬಳಿಸಿದರು. ಕಳೆದ ಪಂದ್ಯದಲ್ಲಿಯೂ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಸುಚಿತ್ ಇಂದಿನ ಪಂದ್ಯದಲ್ಲಿ ಮತ್ತೆ ಜಾದೂ ಮಾಡಿದ್ದಾರೆ. ಹಾಗಿದ್ದರೂ ನಾಯಕ ಜಯದೇವ್ ಶಾ 97 ರನ್  ಮತ್ತು ಕಮಲೇಶ್ ಮಕ್ವಾನ ಕೆಳಕ್ರಮಾಂಕದಲ್ಲಿ 46 ರನ್ ಗಳಿಸಿ ಸೌರಾಷ್ಟ್ರಕ್ಕೆ ಉತ್ತಮ ಮೊತ್ತ ಕಲೆ ಹಾಕಲು ಸಹಾಯ ಮಾಡಿದರು. ಉಳಿದ ವಿಕೆಟ್ ಗಳ ಪೈಕಿ ಪವನ್ ದೇಶಪಾಂಡೆ 3 ಮತ್ತು ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು.

ಇದೀಗ ತನ್ನ ಸರದಿ ಆರಂಭಿಸಿರುವ ಕರ್ನಾಟಕ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದೆ. ಆರಂಭಿಕರಾದ ರವಿಕಾಂತ್ ಸಮರ್ಥ್ 6 ಮತ್ತು ದೇಗಾ ನಿಶ್ಚಲ್ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪಾಯಕಾರಿ ಖವಾಜರನ್ನು ಪೆವಿಲಿಯನ್ ಗೆ ಕಳುಹಿಸಿದ ರವಿಚಂದ್ರನ್ ಅಶ್ವಿನ್