Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಕರಣ್ ನಾಯರ್-ಮನೀಶ್ ಪಾಂಡೆ ಸಾಹಸಕ್ಕೆ ಸೆಮಿಫೈನಲ್ ಗೇರಿದ ಕರ್ನಾಟಕ

ರಣಜಿ ಟ್ರೋಫಿ ಕ್ರಿಕೆಟ್: ಕರಣ್ ನಾಯರ್-ಮನೀಶ್ ಪಾಂಡೆ ಸಾಹಸಕ್ಕೆ ಸೆಮಿಫೈನಲ್ ಗೇರಿದ ಕರ್ನಾಟಕ
ಬೆಂಗಳೂರು , ಶುಕ್ರವಾರ, 18 ಜನವರಿ 2019 (11:44 IST)
ಬೆಂಗಳೂರು: ರಣಜಿ ಟ್ರೋಫಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಂತಿಮ ದಿನವಾದ ಇಂದು ರಾಜಸ್ಥಾನವನ್ನು 6 ವಿಕೆಟ್ ಗಳಿಂದ ಸೋಲಿಸಿ ಕರ್ನಾಟಕ ಸೆಮಿಫೈನಲ್ ಗೇರಿದೆ.


ನಿನ್ನೆ 184 ರನ್ ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆದರೆ ಇಂದು ಕರ್ನಾಟಕದ ಪರ ಸ್ಟಾರ್ ಆಟಗಾರರಾದ ಕರುಣ್ ನಾಯರ್ ಮತ್ತು ಮನೀಶ್ ಪಾಂಡೆ ವಿಕೆಟ್ ಕಳೆದುಕೊಳ್ಳದೇ ಗೆಲುವಿನ ದಡ ಸೇರಿಸಿದರು. ಕರುಣ್ 61 ರನ್ ಗಳಿಸಿದರೆ ಮನೀಶ್ ಪಾಂಡೆ 87 ಅಜೇಯ 87 ರನ್ ಗಳಿಸಿದರು.

ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವಿನ ನಗೆ ಬೀರಿದ ಕರ್ನಾಟಕ ಮತ್ತೊಮ್ಮೆ ರಣಜಿ ಟ್ರೋಫಿ ಸೆಮಿಫೈನಲ್ ಗೇರಿದಂತಾಗಿದೆ. ಮನೀಶ್ ಗೆಲುವಿನ ರನ್ ಬಾರಿಸುತ್ತಿದ್ದಂತೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಳೆ ನಿಂತ ಮೇಲೆ ಆಸ್ಟ್ರೇಲಿಯಾ ಮೇಲೆ ಭುವನೇಶ್ವರ್ ಆಟ!