Select Your Language

Notifications

webdunia
webdunia
webdunia
webdunia

ರಣಜಿ ಕ್ರಿಕೆಟ್: ತಕ್ಕ ಸಮಯದಲ್ಲೇ ತಿರುಗಿಬಿದ್ದ ಕರ್ನಾಟಕ

ರಣಜಿ ಕ್ರಿಕೆಟ್: ತಕ್ಕ ಸಮಯದಲ್ಲೇ ತಿರುಗಿಬಿದ್ದ ಕರ್ನಾಟಕ
ಮುಂಬೈ , ಶನಿವಾರ, 4 ಜನವರಿ 2020 (16:34 IST)
ಮುಂಬೈ: ರಣಜಿ ಕ್ರಿಕೆಟ್ ಪಂದ್ಯದಲ್ಲಿ ಇನ್ನೇನು ಕುಸಿಯಿತು ಎನ್ನುವಾಗ ಕರ್ನಾಟಕಕ್ಕೆ ಬೌಲರ್ ಗಳು ಆಸರೆಯಾಗಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಅಲ್ಪ ಮುನ್ನಡೆ ಸಾಧಿಸಿದ ಕರ್ನಾಟಕ ಈಗ ಮುಂಬೈ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದೆ.


ಮೊದಲ ಇನಿಂಗ್ಸ್ ನಲ್ಲಿ 218 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕರ್ನಾಟಕಕ್ಕೆ 24 ರನ್ ಗಳ ಮುನ್ನಡೆ ಲಭಿಸಿತು. ಬಳಿಕ ಇನಿಂಗ್ಸ್ ಆರಂಭಿಸಿದ ಮುಂಬೈಗೆ ಅನುಭವಿ ವೇಗಿ ಅಭಿಮನ್ಯು ಮಿಥುನ್ ಸಿಂಹ ಸ್ವಪ್ನರಾದರು. ಮೂರು ವಿಕೆಟ್ ಕಿತ್ತ ಮಿಥುನ್ ಎದುರಾಳಿಗಳನ್ನು ನಿಯಂತ್ರಿಸಿದ್ದಾರೆ. ಇನ್ನೊಂದು ವಿಕೆಟ್ ವಿ ಕೌಶಿಕ್ ಪಾಲಾಗಿದೆ.

ಇದರಿಂದಾಗಿ ಇತ್ತೀಚೆಗಿನ ವರದಿ ಬಂದಾಗ ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದ್ದು 44 ರನ್ ಗಳ ಮುನ್ನಡೆ ಸಾಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಕ್ರಿಕೆಟ್: ನಾಟಕೀಯ ಕುಸಿತ ಕಂಡ ಕರ್ನಾಟಕ