ಅಂಡರ್ 19 ವಿಶ್ವಕಪ್: ದ್ರಾವಿಡ್ ಹುಡುಗರಿಗೆ ಆತಂಕ ತಂದಿತ್ತ ಮಳೆ! ಕನಸಿಗೆ ತಣ್ಣೀರು ಬೀಳುತ್ತಾ?!

Webdunia
ಶನಿವಾರ, 3 ಫೆಬ್ರವರಿ 2018 (10:57 IST)
ಬೇ ಓವಲ್: ಅಂಡರ್ 19 ವಿಶ್ವಕಪ್ ಗೆದ್ದು ದಾಖಲೆ ಮಾಡಲು ಹೊರಟಿದ್ದ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಭಾರತೀಯ ಕ್ರಿಕೆಟಿಗರಿಗೆ ಮಳೆ ಅಡ್ಡಗಾಲು ಹಾಕಿದೆ.
 

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾವನ್ನು ಸಂಘಟಿತ ದಾಳಿ ಸಂಘಟಿಸಿ ಕೇವಲ 216 ರನ್ ಗೆ ಆಲೌಟ್ ಮಾಡಿದ್ದ ಭಾರತೀಯರು, ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಆರಂಭಿಸಿದ್ದರು. ಗುರಿ ಬೆನ್ನತ್ತುತ್ತಿದ್ದ ಭಾರತೀಯರು 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 23 ರನ್ ಗಳಿಸಿದ್ದರು. ಆದರೆ ಅಷ್ಟರಲ್ಲಿ ಮಳೆ ಸುರಿಯಲಾರಂಭಿಸಿದೆ.

ಹೀಗಾಗಿ ಪಂದ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ. ಮಳೆ ಬೇಗನೇ ನಿಲ್ಲದಿದ್ದರೆ ಡಕ್ ವರ್ತ್ ಲೂಯಿಸ್ ನಿಯಮದ ಅನುಸಾರ ಗೆಲುವಿಗೆ ಹೊಸ ಗುರಿ ನಿಗದಿಯಾಗಬಹುದು. ಅಥವಾ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ಸಮಾನ ಗೌರವ ಸಿಗಲಿದೆ. ಇದರಿಂದ ನಾಲ್ಕನೇ ಬಾರಿ ವಿಶ್ವಕಪ್ ಗೆದ್ದು ವಿಶ್ವದಾಖಲೆ ಮಾಡುವ ದ್ರಾವಿಡ್ ಹುಡುಗರ ಕನಸು ಭಗ್ನಗೊಳ್ಳಲಿದೆ. ಅಂತೂ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯಕ್ಕೆ ಮಳೆ ಅಡ್ಡಿ ತಂದು ಭಾರತೀಯರಿಗೆ ನಿರಾಶೆ ತಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆದ ವೈಭವ್ ಸೂರ್ಯವಂಶಿ: ಆರು ಪ್ರಶಸ್ತಿಗಳಲ್ಲಿ ಐದನ್ನು ಗೆದ್ದ 15ರ ಪೋರ

IPL 2026: ಗೆಲುವಿನ ಸಂಭ್ರಮದ ನಡುವೆ ವಿರಾಟ್ ಕೊಹ್ಲಿಯನ್ನು ಮೀಟ್ ಮಾಡಿದ ವಿಶೇಷ ವ್ಯಕ್ತಿ Video

IPL 2026: ಹಾರ್ದಿಕ್ ಪಾಂಡ್ಯರಂತೆ ಅಲ್ಲ, ಕೃನಾಲ್ ಪಾಂಡ್ಯ ಮೈದಾನದ ಸೆಲೆಬ್ರೇಷನ್ ತುಂಬಾ ಕ್ಯೂಟ್ Video

IPL 2026 Final: ನೋಡುಷ್ಟು ನೋಡಿದ ಪೊಲೀಸ್ ಅಧಿಕಾರಿ ಆರ್ ಸಿಬಿ ಅಭಿಮಾನಿಗೆ ಮಾಡಿದ್ದೇನು Video

IPL 2026: ಈ ಸಲಾನೂ ಕಪ್ ನಮ್ದೇ: ಗುಜರಾತ್ ನ್ನು ತವರಿನಲ್ಲೇ ಸೋಲಿಸಿದ ಆರ್ ಸಿಬಿ ಚಾಂಪಿಯನ್

ಮುಂದಿನ ಸುದ್ದಿ
Show comments