Select Your Language

Notifications

webdunia
webdunia
webdunia
webdunia

ಭಾರತ-ನ್ಯೂಜಿಲೆಂಡ್ ಟಿ20 ಅಂತಿಮ ಪಂದ್ಯ ನಡೆಯೋದೇ ಡೌಟು!

ಭಾರತ-ನ್ಯೂಜಿಲೆಂಡ್ ಟಿ20 ಅಂತಿಮ ಪಂದ್ಯ ನಡೆಯೋದೇ ಡೌಟು!
ತಿರುವನಂತಪುರಂ , ಮಂಗಳವಾರ, 7 ನವೆಂಬರ್ 2017 (08:59 IST)
ತಿರುವನಂತಪುರಂ: ಸರಣಿ ಗೆಲ್ಲಬೇಕಾದರೆ ಉಭಯ ತಂಡಕ್ಕೂ ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯ. ಆದರೆ ತಿರುವನಂತಪುರಂನ ಗ್ರೀನ್ ಫೀಲ್ಡ್ ನಲ್ಲಿ ಇಂದು ಪಂದ್ಯ ನಡೆಯುವುದೇ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ.

 
ಅದಕ್ಕೆ ಕಾರಣ ಮಳೆ. ನಿನ್ನೆಯ ಮಳೆಗೆ ಮೈದಾನ ಪೂರ್ತಿ ಕೆಸರು ಗೆದ್ದೆಯಂತಾಗಿತ್ತು. ಇಂದೂ ಕೂಡಾ ಮಳೆ ಬರುವ ನಿರೀಕ್ಷೆಯಿದ್ದು, ಮೈದಾನ ಒಣಗಿಸಿ ಪಂದ್ಯಕ್ಕೆ ಸಿದ್ಧ ಮಾಡಿಕೊಡಲೂ ಸಿಬ್ಬಂದಿಗಳಿಗೆ ಅವಕಾಶವಿಲ್ಲದಂತಾಗಿದೆ.

29 ವರ್ಷಗಳ ಬಳಿಕ ಈ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಆದರೆ ಮಳೆ ಎಲ್ಲದಕ್ಕೂ ತಣ್ಣೀರೆರಚದಿದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ. ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದ್ದು, ಒಂದು ವೇಳೆ ಮಳೆಬಂದರೂ 15 ನಿಮಿಷದಲ್ಲಿ ಮೈದಾನ ಸಿದ್ಧಗೊಳಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್ ಹೇಳಿಕೊಂಡಿದೆ. ಆದರೆ ಅದು ಎಷ್ಟು ನಿಜವಾಗುತ್ತದೆ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ, ಕೊಹ್ಲಿ, ಅಕ್ಸರ್ ಪಟೇಲ್ ನಡುವೆ ರನ್ನಿಂಗ್ ರೇಸ್! ಗೆದ್ದವರು ಯಾರು ಗೊತ್ತಾ?