Publish Date: Tue, 23 Aug 2022 (10:22 IST)
Updated Date: Tue, 23 Aug 2022 (10:24 IST)
ಮುಂಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಬಾಕಿಯಿದ್ದು, ಈ ನಡುವೆ ಟೀಂ ಇಂಡಿಯಾಗೆ ಶಾಕ್ ಎದುರಾಗಿದೆ. ಕೋಚ್ ರಾಹುಲ್ ದ್ರಾವಿಡ್ ಕೊರೋನಾ ಸೋಂಕಿಗೊಳಗಾಗಿದ್ದಾರೆ.
ಏಷ್ಯಾ ಕಪ್ ಗೆ ಭಾಗಿಯಾಗಲು ದುಬೈಗೆ ತೆರಳುವ ಮುನ್ನ ಪರೀಕ್ಷೆಗೊಳಗಾಗಿದ್ದಾಗ ದ್ರಾವಿಡ್ ಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಹೀಗಾಗಿ ಅವರೀಗ ತಂಡದ ಜೊತೆ ತೆರಳಲು ಸಾಧ್ಯವಾಗಿಲ್ಲ. ಭಾರತಕ್ಕೆ ಮೊದಲ ಪಂದ್ಯ ಇದೇ ಭಾನುವಾರ ನಿಗದಿಯಾಗಿದ್ದು, ಅಷ್ಟರಲ್ಲಿ ಅವರು ತಂಡದ ಜೊತೆಗಿರುವುದು ಅನುಮಾನ ಎನ್ನಲಾಗಿದೆ.