Webdunia - Bharat's app for daily news and videos

Install App

ಕ್ರಿಕೆಟ್ ಆಡದ ಭಾರತದ ಬಳಿ ಪಾಕ್ ಕೇಳುತ್ತಿದೆ ಈ ದುಬಾರಿ ಹಣ!

Webdunia
ಭಾನುವಾರ, 1 ಅಕ್ಟೋಬರ್ 2017 (07:04 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಸಂಬಂಧ ಹಳಸಿದ ಹಿನ್ನಲೆಯಲ್ಲಿ ಉಭಯ ದೇಶಗಳ ನಡುವೆ ಒಪ್ಪಂದವಾಗಿದ್ದ ಸರಣಿ ನಡೆಯುತ್ತಿಲ್ಲ. ಇದನ್ನು ಮುಂದಿಟ್ಟುಕೊಂಡು ಪಾಕ್, ಭಾರತದ ಬಳಿ ಪರಿಹಾರದ ರೂಪದಲ್ಲಿ ದುಬಾರಿ ಮೊತ್ತ ಕೇಳಿದೆ.

 
2014 ರಲ್ಲಿ ಬಿಸಿಸಿಐ ಆರು ಕ್ರಿಕೆಟ್ ಸರಣಿಗಳನ್ನು ಆಡುವುದಾಗಿ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಒಪ್ಪಂದದ ಪ್ರಕಾರ ಸರಣಿ ಆಡದೇ ಒಪ್ಪಂದ ಮುರಿದಿದೆ. ಗಡಿ ವಿವಾದವನ್ನು ಮುಂದಿಟ್ಟುಕೊಂಡು ಸರಣಿ ಆಡಲು ಒಪ್ಪದೇ ನಮಗೆ ನಷ್ಟವುಂಟುಮಾಡಿದೆ. ಹೀಗಾಗಿ ಪರಿಹಾರ ದೊರಕಿಸಿಕೊಡಬೇಕೆಂದು ಪಿಸಿಬಿ ಐಸಿಸಿ ಬಾಗಿಲು ತಟ್ಟಿದೆ.

ಮೂಲವೊಂದರ ಪ್ರಕಾರ ಪಿಸಿಬಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಪರಿಹಾರದ ರೂಪವಾಗಿ 70 ಮಿಲಿಯನ್ ಅಮೆರಿಕನ್ ಡಾಲರ್ ಪರಿಹಾರ ಕೇಳಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸಲೂ ಅದು ಮುಂದಾಗಿದೆ.

ಉರಿ ದಾಳಿ ನಂತರ ಪಾಕ್ ಜತೆ ಯಾವುದೇ ರೀತಿಯ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದ ಹಿನ್ನಲೆಯಲ್ಲಿ ಬಿಸಿಸಿಐ ಆ ದೇಶದೊಂದಿಗೆ ಒಪ್ಪಂದದ ಪ್ರಕಾರ ಸರಣಿಯಲ್ಲಿ ಪಾಲ್ಗೊಂಡಿಲ್ಲ. ತಟಸ್ಥ ಸ್ಥಳದಲ್ಲಾದರೂ ಆಡಲು ಸರ್ಕಾರ ಒಪ್ಪಿಗೆ ಕೊಡುತ್ತಿಲ್ಲ ಎನ್ನುವ ಕಾರಣಕ್ಕೆ ಬಿಸಿಸಿಐ ಮೌನವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025 DC vs GT: ನಿಂದು ಎಷ್ಟಿದೆಯೋ ನೋಡ್ಕೋ ಯುವ ಕ್ರಿಕೆಟಿಗನಿಗೆ ಮೈದಾನದಲ್ಲೇ ಝಾಡಿಸಿದ ಇಶಾಂತ್ ಶರ್ಮಾ video

ಬಟ್ಲರ್‌ ಅಬ್ಬರಕ್ಕೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಅಗ್ರಸ್ಥಾನದಿಂದ ಕೆಳಗಿಳಿಸಿದ ಗುಜರಾತ್ ಟೈಟಾನ್ಸ್‌

GT vs DC Match:ಅಹಮಾದಾಬಾದ್‌ ಬಿಸಿಲ ತಾಪಕ್ಕೆ ಗ್ರೌಂಡ್‌ನಲ್ಲೇ ಸುಸ್ತಾದ ಇಶಾಂತ್ ಶರ್ಮಾ, ಅವಸ್ಥೆ ನೋಡಿ ಗಾಳಿ ಬೀಸಿದ ಸಹ ಆಟಗಾರರು

DCvsGT Match:ಯಾರ್ಕರ್‌ನೊಂದಿಗೆ ಕೆಎಲ್ ರಾಹುಲ್‌ ವಿಕೆಟ್ ಕಿತ್ತ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

IPL 2025 RCB vs PBKS: ಬೆಂಗಳೂರು ನಿಮ್ಗೆ ಬಿಟ್ಟುಕೊಟ್ವಿ, ಪಂಜಾಬ್ ನಲ್ಲಿ ಬಿಡೋ ಮಾತೇ ಇಲ್ಲ

ಮುಂದಿನ ಸುದ್ದಿ
Show comments