Webdunia - Bharat's app for daily news and videos

Install App

ಏಕಕಾಲಕ್ಕೆ ಕ್ರೀಸ್ ಗೆ ಬಂದು ತಮಾಷೆಗೀಡಾದ ರಿಷಬ್ ಪಂತ್, ಶ್ರೇಯಸ್ ಅಯ್ಯರ್! ಇವರಿಗೆ ಕೊಹ್ಲಿ ಹೇಳಿದ್ದೇನು?

Webdunia
ಸೋಮವಾರ, 23 ಸೆಪ್ಟಂಬರ್ 2019 (09:45 IST)
ಬೆಂಗಳೂರು: ಒಬ್ಬ ಬ್ಯಾಟ್ಸ್ ಮನ್ ಔಟಾದರೆ ಮುಂದಿನ ಕ್ರಮಾಂಕದ ಒಬ್ಬ ಬ್ಯಾಟ್ಸ್ ಮನ್ ಕ್ರೀಸ್ ಗೆ ಬರುವುದು ಸಾಮಾನ್ಯ. ಆದರೆ ಭಾರತ ಮತ್ತು ದ.ಆಫ್ರಿಕಾ ನಡುವಿನ ಟಿ20 ಪಂದ್ಯದ ವೇಳೆ ಇಬ್ಬರು ಬ್ಯಾಟ್ಸ್ ಮನ್ ಗಳು ಮೈದಾನಕ್ಕೆ ಬಂದು ತಮಾಷೆಗೀಡಾದ ಘಟನೆ ನಡೆದಿದೆ.


ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಆರಂಭಿಕ ಶಿಖರ್ ಧವನ್ ಔಟಾದ ಬಳಿಕ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ರಿಷಬ್ ಪಂತ್ ಅಥವಾ ಶ್ರೇಯಸ್ ಅಯ್ಯರ್ ಇಬ್ಬರಲ್ಲಿ ಒಬ್ಬರು ಮೈದಾನಕ್ಕೆ ಬರಬೇಕಿತ್ತು. ಆದರೆ ಇವರಿಬ್ಬರೂ ಏಕಕಾಲಕ್ಕೆ ಬ್ಯಾಟ್ ಹಿಡಿದುಕೊಂಡು ಬರಲು ಹೊರಟಿದ್ದು, ಹಾಸ್ಯಕ್ಕೀಡಾದರು. ಬಳಿಕ ರಿಷಬ್ ಪಂತ್‍ ಅವರೇ ಕ್ರೀಸ್ ಗಿಳಿದರು.

ಈ ಬಗ್ಗೆ ಪಂದ್ಯದ ನಂತರ ಮಾತನಾಡಿದ ನಾಯಕ ಕೊಹ್ಲಿ ಇದು ಸಂವಹನ ಕೊರತೆಯಿಂದ ಹೀಗಾಯಿತು ಎಂದಿದ್ದಾರೆ. ಒಂದು ವೇಳೆ ಇಬ್ಬರೂ ಮೈದಾನಕ್ಕೆ ಬಂದಿದ್ದರೆ ತಮಾಷೆಯಾಗುತ್ತಿತ್ತು. ಇದಕ್ಕೆ ಕಾರಣವಾಗಿದ್ದು, ಬ್ಯಾಟಿಂಗ್ ಕೋಚ್ ಇವರಿಬ್ಬರಲ್ಲಿ ಒಂದು ವೇಳೆ 10 ಓವರ್ ಗಳ ಮೊದಲು ಕ್ರೀಸ್ ಗಿಳಿಯಬೇಕಾದರೆ ಮೊದಲು ಶ್ರೇಯಸ್ ಅಯ್ಯರ್ ಆಡಲಿ ಒಂದು ವೇಳೆ ಮೂರನೇ ಬ್ಯಾಟ್ಸ್ ಮನ್ 10 ಓವರ್ ನಂತರ ಔಟಾದರೆ ರಿಷಬ್ ಪಂತ್ ಮೊದಲು ಬ್ಯಾಟಿಂಗ್ ಮಾಡಲಿ ಎಂದಿದ್ದರಂತೆ. ಆದರೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಇಬ್ಬರೂ ಏಕಕಾಲಕ್ಕೆ ಬ್ಯಾಟ್, ಪ್ಯಾಡ್ ಕಟ್ಟಿಕೊಂಡು ಮೈದಾನಕ್ಕೆ ಬರಲು ಹೊರಟಿದ್ದೇ ಈ ತಮಾಷೆಗೆ ಕಾರಣವಾಯಿತು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments