Select Your Language

Notifications

webdunia
webdunia
webdunia
webdunia

RCB: ಆರ್ ಸಿಬಿ ತಂಡದ ಮೆರವಣಿಗೆ ಇರುತ್ತೆ ಎಂದುಕೊಂಡವರಿಗೆ ಗೃಹಸಚಿವರಿಂದ ಶಾಕ್

Parameshwar

Krishnaveni K

ಬೆಂಗಳೂರು , ಬುಧವಾರ, 4 ಜೂನ್ 2025 (13:26 IST)
ಬೆಂಗಳೂರು: ಐಪಿಎಲ್ ಚಾಂಪಿಯನ್ ಆಗಿರುವ ಆರ್ ಸಿಬಿ ತಂಡ ಇಂದು ಸಂಜೆ ವಿಧಾನಸೌಧದಿಂದ ಚಿನ್ನಸ್ವಾಮಿ ಮೈದಾನದವರೆಗೆ ಮೆರವಣಿಗೆಯಿರುತ್ತದೆ ಎಂದು ಅಭಿಮಾನಿಗಳು ಕಾದು ನಿಂತಿದ್ದಾರೆ. ಆದರೆ ಗೃಹಸಚಿವ ಪರಮೇಶ್ವರ್ ಅವರಿಗೆ ಶಾಕ್ ನೀಡಿದ್ದಾರೆ.

ಐಪಿಎಲ್ ನಲ್ಲಿ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಇದೇ ಮೊದಲ ಬಾರಿಗೆ ಆರ್ ಸಿಬಿ ಕಪ್ ಗೆದ್ದಿದೆ. ಸಹಜವಾಗಿಯೇ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಎದಿರುಗೊಳ್ಳಲು ಕಾದು ನಿಂತಿದ್ದಾರೆ. ಈಗಾಗಲೇ ಆರ್ ಸಿಬಿ ಇಂದು ಓಪನ್ ಮೆರವಣಿಗೆ ಇರುತ್ತದೆ ಎಂದು ಪ್ರಕಟಿಸಿತ್ತು.

ಆದರೆ ಇದೀಗ ಗೃಹಸಚಿವರು ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಓಪನ್ ಮೆರವಣಿಗೆ ಇರಲ್ಲ. ಬದಲಾಗಿ ವಿಧಾನಸೌಧದ ಮುಂಭಾಗ ಇಂದು ಸಿಎಂ ಸಿದ್ದರಾಮಯ್ಯ ಆರ್ ಸಿಬಿ ಆಟಗಾರರಿಗೆ ಸನ್ಮಾನ ಮಾಡಲಿದ್ದಾರೆ. ಎಲ್ಲಾ ಆಟಗಾರರು ಬಸ್ ನಲ್ಲಿ ಬರಲಿದ್ದಾರೆ. ಬಳಿಕ ಒಂದಿಬ್ಬರು ಆಟಗಾರರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಬಹುದು. ಇದಾದ ಬಳಿಕ ಎಲ್ಲಾ ಆಟಗಾರರೂ ಸ್ಟೇಡಿಯಂಗೆ ತೆರಳಲಿದ್ದಾರೆ. ಅಲ್ಲಿ ಅಭಿಮಾನಿಗಳಿಗಾಗಿ ಕೆಎಸ್ ಸಿಎ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಗೃಹಸಚಿವರು ಹೇಳಿದ್ದಾರೆ. ಮೈದಾನಕ್ಕೆ ಹೋಗಿ ಆಟಗಾರರ ಸಂಭ್ರಮಾಚರಣೆ ನೋಡಬೇಕು ಎಂದರೆ ಟಿಕೆಟ್ ಕೊಡಬೇಕು. ಮೆರವಣಿಗೆ ಎಂದರೆ ಆಟಗಾರರ ಜೊತೆ ಯಾವುದೇ ಕಟ್ಟಪಾಡು ಇಲ್ಲದೇ ಸಂಭ್ರಮಿಸಬಹುದಿತ್ತು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದೆಲ್ಲಾ ಈಗ ಸುಳ್ಳಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025 Final: ಆರ್ ಸಿಬಿ ಜೊತೆಗೆ ಈ ಸಾಲೂ ಫೇಮಸ್... ವಿಶ್ವದಾದ್ಯಂತ ಈಗ ಕನ್ನಡದ್ದೇ ಹವಾ