Publish Date: Tue, 12 Jul 2022 (08:40 IST)
Updated Date: Tue, 12 Jul 2022 (08:59 IST)
ಲಂಡನ್: ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ ದೀಪಕ್ ಹೂಡಾಗೆ ಅನ್ಯಾಯವಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯರ ಅನುಪಸ್ಥಿತಿಯಲ್ಲಿ ದೀಪಕ್ ಹೂಡಾರಂತಹ ಯುವ ಪ್ರತಿಭೆಗಳಿಗೆ ಅವಕಾಶ ಸಿಕ್ಕಿತ್ತು. ಆದರೆ ಈಗ ಹಿರಿಯ ಆಟಗಾರರು ಬಂದ ಮೇಲೆ ಪ್ರತಿಭಾವಂತರು ಬೆಂಚ್ ಕಾಯಿಸುವಂತಾಗಿದೆ.
ವಿರಾಟ್ ಕೊಹ್ಲಿ ಒಂದು ಕಡೆಯಾದರೆ, ಶ್ರೇಯಸ್ ಅಯ್ಯರ್ ಬಗ್ಗೆಯೂ ಟೀಕೆ ಕೇಳಿಬರುತ್ತಿದೆ. ಅಯ್ಯರ್ ಗೆ ಪದೇ ಪದೇ ಅವಕಾಶ ನೀಡಿದರೂ ಅವರಿಂದ ತಕ್ಕ ಇನಿಂಗ್ಸ್ ಬರಲಿಲ್ಲ. ಹೀಗಾಗಿ ಅಯ್ಯರ್ ನಂತಹ ಆಟಗಾರರಿಂದಾಗಿ ದೀಪಕ್ ಹೂಡಾರಂತಹ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.