Webdunia - Bharat's app for daily news and videos

Install App

ರನ್ ನೀಡದೇ ಟೀಂ ಇಂಡಿಯಾದ ಮೂರು ವಿಕೆಟ್ ಕಿತ್ತ ಲಕ್ಮಲ್

Webdunia
ಗುರುವಾರ, 16 ನವೆಂಬರ್ 2017 (17:16 IST)
ಕೋಲ್ಕೊತ್ತಾ: ಟೀಂ ಇಂಡಿಯಾಕ್ಕೆ ಇಂದು ಅದೇನು ಕೆಟ್ಟ ಗಳಿಗೆಯೋ. ಆರಂಭದಲ್ಲೇ ಮಳೆ ಶನಿಯಂತೆ ಕಾಡುತ್ತಿದ್ದ. ಪಂದ್ಯ ಹಾಗೂ ಹೀಗೂ ಅರ್ಧ ದಿನ ಕಳೆದ ಮೇಲೆ ಆರಂಭವಾದರೂ, ಲಂಕಾದ ಲಕ್ಮಲ್ ಕಮಾಲ್ ಗೆ ಜುಜುಬಿ 17 ರನ್ ಗೆ ಪ್ರಮುಖ ಮೂರು ವಿಕೆಟ್ ಕಿತ್ತಿದ್ದಾರೆ.
 

ಈ ಒದ್ದೆ ಪಿಚ್ ನಲ್ಲಿ ಬ್ಯಾಟಿಂಗ್ ನಡೆಸುವುದು ಕಷ್ಟವೇ. ತಾವು ಟಾಸ್ ಗೆದ್ದಿದ್ದರೂ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ನಾಯಕ ಕೊಹ್ಲಿ ಮೊದಲೇ ಹೇಳಿದ್ದರು. ಆದರೆ ಭಾರತದ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು ಲಂಕಾದ ಲಕ್ಮಲ್ 6 ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೇ 3 ವಿಕೆಟ್ ಕಿತ್ತಿದ್ದು ಮಾತ್ರ ಅತಿಥೇಯರಿಗೆ ಎದುರಿಸಲಾಗದ ಆಘಾತ ನೀಡಿತ್ತು.

ಅದರಲ್ಲೂ ಮೊದಲ ಎಸೆತದಲ್ಲಿ ರಾಹುಲ್ ರನ್ನು ಶೂನ್ಯಕ್ಕೆ ಔಟ್ ಮಾಡಿದ ಲಕ್ಮಲ್ ವಿಶ್ವವನ್ನೇ ನಡುಗಿಸಿದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಯನ್ನೂ ಸೊನ್ನೆ ಸುತ್ತುವಂತೆ ಮಾಡಿದ್ದು ನಿಜಕ್ಕೂ ಆತನ ಕಮಾಲ್ ಎನ್ನದೇ ವಿಧಿಯಿಲ್ಲ.

ದಿನವಿಡೀ ಹನಿ ಮಳೆಯಿಂದಾಗಿ 12 ಓವರ್ ಗಳಷ್ಟೇ ಆಟ ನಡೆಯಿತು. ಆದರೆ ಈ ಕಿರು ಅವಧಿಯಲ್ಲಿ ಭಾರತದ ಮೇಲೆ ಸಂಕಷ್ಟದ ಮೋಡವೇ ಕವಿದಂತಾಯಿತು. ಇದೀಗ 8 ರನ್ ಗಳಿಸಿರುವ ಚೇತೇಶ್ವರ ಪೂಜಾರ ಮತ್ತು ಇನ್ನೂ ಖಾತೆ ತೆರೆಯದ ಅಜಿಂಕ್ಯಾ ರೆಹಾನೆ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ಮುಂದಿನ ಸುದ್ದಿ
Show comments