Select Your Language

Notifications

webdunia
webdunia
webdunia
Wednesday, 9 April 2025
webdunia

ಅಸಹಾಯಕ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಗಾಗಿ ಕ್ರಿಕೆಟಿಗ ಕೃನಾಲ್ ಪಾಂಡ್ಯ ಎಂಥಾ ಕೆಲಸ ಮಾಡಿದ್ದಾರೆ ಗೊತ್ತಾ?!

ಜೇಕಬ್ ಮಾರ್ಟಿನ್
ಮುಂಬೈ , ಬುಧವಾರ, 23 ಜನವರಿ 2019 (09:06 IST)
ಮುಂಬೈ: ಅಪಘಾತಗೊಂಡು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆಗೂ ದುಡ್ಡಿಲ್ಲದೇ ಪರದಾಡುತ್ತಿರುವ ಜೇಕಬ್ ಮಾರ್ಟಿನ್ ಸಹಾಯಕ್ಕೆ ಹಲವರು ಧಾವಿಸಿದ್ದಾರೆ. ಅವರ ಪೈಕಿ ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಕೃನಾಲ್ ಪಾಂಡ್ಯ ಸೇರಿದ್ದಾರೆ.


ಹಾರ್ದಿಕ್ ಪಾಂಡ್ಯ ಸಹೋದರನೂ ಆಗಿರುವ ಕೃನಾಲ್, ಜೇಕಬ್ ನೆರವಿಗಾಗಿ ಖಾಲಿ ಚೆಕ್ ಹಾಳೆಯೊಂದನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಬರೋಡಾ ಕ್ರಿಕೆಟ್ ಅಸೋಸಿಯೇಷನ್ ನ ಮಾಜಿ ಕಾರ್ಯದರ್ಶಿ ಸಂಜಯ್ ಪಟೇಲ್ ಮೂಲಕ ಜೇಕಬ್ ಮಾರ್ಟಿನ್ ಗೆ ತಲುಪಿಸುವಂತೆ ಚೆಕ್ ಹಾಳೆಯೊಂದನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ, ‘ಒಂದು ಲಕ್ಷಕ್ಕಿಂತ ಮೇಲ್ಪಟ್ಟು ಎಷ್ಟು ಬೇಕಾದರೂ ಮೊತ್ತ ಬರೆದುಕೊಳ್ಳಿ’ ಎಂದು ಮನವಿ ಮಾಡಿದ್ದಾರಂತೆ.

ಆಸ್ಪತ್ರೆಗೆ ಕಟ್ಟಲು ದುಡ್ಡಿಲ್ಲದೇ ಪರದಾಡುತ್ತಿರುವ ಜೇಕಬ್ ಸ್ಥಿತಿ ನೋಡಿ ಬಿಸಿಸಿಐ ಸೇರಿದಂತೆ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ, ಜಹೀರ್ ಖಾನ್, ಮುನಾಫ್ ಪಟೇಲ್, ಯೂಸಫ್ ಪಠಾಣ್,  ಇರ್ಫಾನ್ ಪಠಾಣ್ ಸೇರಿದಂತೆ ಹಲವರು ಸಹಾಯ ಹಸ್ತ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗ ರೋಹಿತ್ ಶರ್ಮಾ ರಹಸ್ಯ ಬಾಯ್ಬಿಟ್ಟ ಮಾಜಿ ಪ್ರೇಯಸಿ