Select Your Language

Notifications

webdunia
webdunia
webdunia
webdunia

ಕನ್ನಡದಲ್ಲಿ ಧನ್ಯವಾದ ಸಲ್ಲಿಸಿದ ಕೆಎಲ್ ರಾಹುಲ್: ಆರ್ ಸಿಬಿ ಬಾ ಮಗ ಎಂದ ಫ್ಯಾನ್ಸ್

KL Rahul

Krishnaveni K

ಬೆಂಗಳೂರು , ಸೋಮವಾರ, 9 ಸೆಪ್ಟಂಬರ್ 2024 (11:09 IST)
ಬೆಂಗಳೂರು: ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ನಾಲ್ಕೂ ದಿನವೂ ಮೈದಾನದಲ್ಲಿ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಕನ್ನಡಿಗ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿದ್ದಾರೆ.

ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಎ ತಂಡದ ಪರ ಆಡಿದ ಕೆಎಲ್ ರಾಹುಲ್ ಬಿ ತಂಡದ ವಿರುದ್ಧ ಎರಡನೇ ಇನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ ದುರದೃಷ್ಟವಶಾತ್ ರಾಹುಲ್ ತಂಡ ಈ ಪಂದ್ಯವನ್ನು ಸೋತಿದೆ. ಹಾಗಿದ್ದರೂ ಎಲ್ಲಾ ದಿನಗಳಲ್ಲೂ ಮೈದಾನಕ್ಕೆ ಬಂದ ರಾಹುಲ್ ಅಭಿಮಾನಿಗಳು ತವರಿನ ಹುಡುಗನಿಗೆ ಚಿಯರ್ ಅಪ್ ಮಾಡಿದ್ದಾರೆ.

ಇದು ರಾಹುಲ್ ಹೃದಯ ತಟ್ಟಿದೆ. ಪಂದ್ಯದ ನಂತರ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಎಂದು ಕನ್ನಡದಲ್ಲೇ ಬರೆದು ಧನ್ಯವಾದ ಸಲ್ಲಿಸಿದ್ದಾರೆ. ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು, ನೀವು ನಮ್ಮ ಕನ್ನಡದ ಹುಡುಗ, ಕರ್ನಾಟಕದ ಮನೆ ಮಗ ಎಂದಿದ್ದಾರೆ.

ಅನೇಕರು ಈ ಸಲ ಐಪಿಎಲ್ ನಲ್ಲಿ ಆರ್ ಸಿಬಿಗೆ ಬಾ ಮಗ ಎಂದು ಕರೆದಿದ್ದಾರೆ. ಮತ್ತೆ ಕೆಲವರು ರಾಹುಲ್ ತಮ್ಮ ಮೇಲಿನ ಅಭಿಮಾನಿಗಳ ಪ್ರೀತಿ ನೋಡಿಯಾದರೂ ಈ ಸಲ ಆರ್ ಸಿಬಿಗೆ ಬರೋದು ಪಕ್ಕಾ ಎಂದಿದ್ದಾರೆ. ವಿಶೇಷವೆಂದರೆ ರಾಹುಲ್ ಚಿನ್ನಸ್ವಾಮಿ ಮೈದಾನದಲ್ಲಿ ಆಡುತ್ತಿರುವಾಗ ಅಭಿಮಾನಿಗಳು ‘ಆರ್ ಸಿಬಿ ಮುಂದಿನ ಕ್ಯಾಪ್ಟನ್’ ಎಂದು ಕೂಗಿ ಹೇಳುತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

IND vs BAN test: ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾ ಇಲ್ಲಿದೆ