Webdunia - Bharat's app for daily news and videos

Install App

ನಿಸ್ವಾರ್ಥಿಯಾಗಿ ತನಗೆ ಸಿಗಬೇಕಾಗಿದ್ದ ಪಟ್ಟ ಸಾಯಿ ಸುದರ್ಶನ್ ಗೆ ಕೊಟ್ಟ ಕೆಎಲ್ ರಾಹುಲ್

Webdunia
ಶನಿವಾರ, 23 ಡಿಸೆಂಬರ್ 2023 (08:20 IST)
ಪರ್ಲ್: ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿ ಬಳಿಕ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ತನಗೆ ಸಿಗಬೇಕಾಗಿದ್ದ ಪದಕವನ್ನು ಸಾಯಿ ಸುದರ್ಶನ್ ಗೆ ಕೊಡಿಸಿ ನಿಸ್ವಾರ್ಥತೆ ಮೆರೆದಿದ್ದಾರೆ.

ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಪ್ರತೀ ಸರಣಿ ಮುಗಿದ ಬಳಿಕ ಆಯಾ ಸರಣಿಯಲ್ಲಿ ಉತ್ತಮ ಫೀಲ್ಡಿಂಗ್ ಮಾಡಿದ ಆಟಗಾರನಿಗೆ ಬೆಸ್ಟ್ ಫೀಲ್ಡರ್ ಅವಾರ್ಡ್ ಕೊಡಿಸಲಾಗುತ್ತಿದೆ. ಫೀಲ್ಡಿಂಗ್ ಕೋಚ್ ಬೆಸ್ಟ್ ಫೀಲ್ಡರ್ ಯಾರು ಎಂದು ಘೋಷಣೆ ಮಾಡುತ್ತಾರೆ. ಅವರಿಗೆ ಪದಕ ನೀಡಿ ಗೌರವಿಸಲಾಗುತ್ತದೆ.

ಅದೇ ರೀತಿ ದ.ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಬೆಸ್ಟ್ ಫೀಲ್ಡರ್ ಪದಕಕ್ಕೆ ಕೆಎಲ್ ರಾಹುಲ್ ಫೀಲ್ಡಿಂಗ್ ಕೋಚ್ ನ ಮೊದಲ ಆಯ್ಕೆಯಾಗಿದ್ದರು. ಒಟ್ಟು ಆರು ಕ್ಯಾಚ್ ಪಡೆದ ರಾಹುಲ್ ಮತ್ತು ಒಂದು ಅತ್ಯುತ್ತಮ ಕ್ಯಾಚ್ ಪಡೆದ ಯುವ ಆಟಗಾರ ಸಾಯಿ ಸುದರ್ಶನ್ ಬೆಸ್ಟ್ ಫೀಲ್ಡರ್ ಅವಾರ್ಡ್ ಗೆ ರೇಸ್ ನಲ್ಲಿದ್ದರು.

ಆದರೆ ತಾನು ಒಂದು ಕ್ಯಾಚ್ ಕೈ ಚೆಲ್ಲಿದ್ದೆ ಎಂಬ ಕಾರಣಕ್ಕೆ ರಾಹುಲ್ ಆ ಪದಕವನ್ನು ಸಾಯಿ ಸುದರ್ಶನ್ ಗೆ ಕೊಡಲು ಸೂಚಿಸಿದ್ದಾರೆ.  ಈ ಕಾರಣಕ್ಕೆ ಸಾಯಿ ಸುದರ್ಶನ್ ಗೆ ಬೆಸ್ಟ್ ಫೀಲ್ಡರ್ ಅವಾರ್ಡ್ ಸಿಕ್ಕಿದೆ. ಕೆಎಲ್ ರಾಹುಲ್ ನಿಸ್ವಾರ್ಥ ನಡೆಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾಕ್ಕೆ ಇದೆಂಥಾ ಅವಸ್ಥೆ

ಶಮಿ ಡ್ರಾಪ್ ಮಾಡಿಸಿದ್ರು, ರೋಹಿತ್, ಕೊಹ್ಲಿ, ಅಶ್ವಿನ್ ನಿವೃತ್ತಿ ಮಾಡಿಸಿದ್ರು: ಗಂಭೀರ್ ವಿರುದ್ಧ ಆರೋಪ ಪಟ್ಟಿ

ಗೌತಮ್ ಗಂಭೀರ್ ತಾನಾಗಿಯೇ ಕೋಚ್ ಹುದ್ದೆ ಬಿಟ್ರೆ ಒಳ್ಳೇದು

ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ

RCB ವೇಗಿ ಯಶ್ ದಯಾಳ್ ವಿರುದ್ಧ ಬಾಲಕಿ ಮೇಲೆ ರೇಪ್ ಆರೋಪ: ಎಫ್ಐಆರ್ ದಾಖಲು

ಮುಂದಿನ ಸುದ್ದಿ
Show comments