ಮೂರನೇ ಟೆಸ್ಟ್ ಗೆ ಮುನ್ನ ಫಿಟ್ನೆಸ್ ಬಗ್ಗೆ ಸಾಕ್ಷಿ ಕೊಟ್ಟ ಕೆಎಲ್ ರಾಹುಲ್

Krishnaveni K
ಸೋಮವಾರ, 12 ಫೆಬ್ರವರಿ 2024 (10:34 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಅನುಭವಿ ಆಟಗಾರ ಕೆಎಲ್ ರಾಹುಲ್ ಆಡುವ ಬಗ್ಗೆ ಅವರೇ ಅಪ್ ಡೇಟ್ ಕೊಟ್ಟಿದ್ದಾರೆ.

ಅಂತಿಮ ಮೂರು ಟೆಸ್ಟ್ ಪಂದ್ಯಗಳಿಗೆ ಮೊನ್ನೆಯಷ್ಟೇ ತಂಡ ಘೋಷಣೆಯಾಗಿತ್ತು. ಈ ತಂಡದಲ್ಲಿ ಗಾಯಗೊಂಡಿದ್ದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಕೂಡಾ ಸೇರ್ಪಡೆಯಾಗಿದ್ದಾರೆ. ಆದರೆ ಈ ಇಬ್ಬರೂ ಫಿಟ್ನೆಸ್ ಟೆಸ್ಟ್ ಪಾಸಾದರೆ ಮಾತ್ರ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿತ್ತು.

ಫಿಟ್ನೆಸ್ ಬಗ್ಗೆ ಸಾಕ್ಷಿ ಕೊಟ್ಟ ಕೆಎಲ್ ರಾಹುಲ್
ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ರಾಹುಲ್ ಎರಡನೇ ಪಂದ್ಯದ ವೇಳೆಗೆ ತೊಡೆ ನೋವಿನಿಂದಾಗಿ ಹೊರಗುಳಿದಿದ್ದರು. ಇದೀಗ ಮೂರನೇ ಪಂದ್ಯಕ್ಕೆ ಅವರು ಫಿಟ್ನೆಸ್ ಸಾಬೀತುಪಡಿಸಬೇಕಿದೆ. ಸದ್ಯಕ್ಕೆ ರಾಹುಲ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಆ ಮೂಲಕ ತಾವು ಆಡಲು ಸಮರ್ಥರಿರುವುದಾಗಿ ಸುಳಿವು ನೀಡಿದ್ದಾರೆ.

ಮೂರನೇ ಟೆಸ್ಟ್ ಪಂದ್ಯಕ್ಕೆ ಇನ್ನೂ ಮೂರು ದಿನ ಬಾಕಿಯಿದ್ದು, ಆ ವೇಳೆಗೆ ರಾಹುಲ್ ಫಿಟ್ ಆಗಿ ಆಡಬಹುದು ಎಂಬ ನಿರೀಕ್ಷೆಯಿದೆ. ಈ ಫೋಟೋ ನೋಡಿದ ಮೇಲೆ ಅಭಿಮಾನಿಗಳು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಒಂದೆಡೆ ಕೊಹ್ಲಿ ಅನುಪಸ್ಥಿತಿ, ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಕೂಡಾ ಗಾಯದಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡಕ್ಕೆ ಅನುಭವಿ ಆಟಗಾರರೊಬ್ಬರ ಅಗತ್ಯವಿದೆ. ಆ ಸ್ಥಾನವನ್ನು ರಾಹುಲ್ ತುಂಬಬೇಕಿದೆ. ಹೀಗಾಗಿ ರಾಹುಲ್ ಫಿಟ್ ಆಗಿ ತಂಡಕ್ಕೆ ಮರಳುವುದು ಅನಿವಾರ್ಯವಾಗಿದೆ. ಅವರ ಜೊತೆಗೆ ರವೀಂದ್ರ ಜಡೇಜಾ ಕೂಡಾ ಫಿಟ್ನೆಸ್ ಮರಳಿ ಪಡೆಯಬಹುದು ಎಂಬ ವಿಶ್ವಾಸವಿದೆ. ಯಾಕೆಂದರೆ ಮೂರನೇ ಪಂದ್ಯ ಜಡೇಜಾ ತವರು ರಾಜ್ ಕೋಟ್ ನಲ್ಲೇ ನಡೆಯಲಿದೆ. ಹೀಗಾಗಿ ಅವರೂ ಆಡಲು ಉತ್ಸುಕರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಟ್ರೋಫಿ ಕೊಡಲು ಷರತ್ತು ಹಾಕಿದ ಮೊಹ್ಸಿನ್ ನಖ್ವಿ: ನಿನ್ನತ್ರನೇ ಇಟ್ಕೋ ಅಂತಿದೆ ಭಾರತ

ಸೂರ್ಯಕುಮಾರ್ ಯಾದವ್ ಸೇನೆಗೆ ದೇಣಿಗೆ ಕೊಟ್ಟಾಯ್ತು, ಎಎಪಿ ನಾಯಕ ಯಾವಾಗ ಎಂದು ಪ್ರಶ್ನಿಸಿದ ನೆಟ್ಟಿಗರು

ಟೀಂ ಇಂಡಿಯಾಗೆ ಕಪ್ ಸಿಗಬೇಕಾದ್ರೆ ಮೊಹ್ಸಿನ್ ನಖ್ವಿ ಹೇಳುವ ಈ ಷರತ್ತು ಒಪ್ಪಿಕೊಳ್ಳಬೇಕಂತೆ

ದೇಶದ ಪ್ರಧಾನಿಯೇ ಹೀಗೆ ಹೇಳುವಾಗ.. ಮೋದಿ ಹೇಳಿಕೆ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ

ಟ್ರೋಫಿ ಕದ್ದೊಯ್ದ ಮೊಹ್ಸಿನ್ ನಖ್ವಿ ಭಾರತದ ವಿರುದ್ಧವೇ ಟ್ವೀಟ್: ಕೆಲವೇ ಕ್ಷಣಗಳಲ್ಲಿ ಎಕ್ಸ್ ಖಾತೆ ಬ್ಯಾನ್

ಮುಂದಿನ ಸುದ್ದಿ
Show comments