Webdunia - Bharat's app for daily news and videos

Install App

ಕರ್ನಾಟಕ ವರ್ಸಸ್ ಹರ್ಯಾಣ ರಣಜಿ ಮ್ಯಾಚ್: ಕೆಎಲ್ ರಾಹುಲ್ ಗಳಿಸಿದ್ದೆಷ್ಟು

Krishnaveni K
ಗುರುವಾರ, 30 ಜನವರಿ 2025 (16:29 IST)
Photo Credit: X
ಬೆಂಗಳೂರು: ನಗರದ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ವರ್ಸಸ್ ಹರ್ಯಾಣ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಪರ ಆಡುತ್ತಿರುವ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಗಳಿಸಿದ್ದೆಷ್ಟು ಗೊತ್ತಾ?

ಇಂದು ಟಾಸ್ ಗೆದ್ದ ಹರ್ಯಾಣ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ತವರಿನ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದೆ. ಕರ್ನಾಟಕದ ಪರ ನಾಯಕ ಮಯಾಂಕ್ ಅಗರ್ವಾಲ್ 91 ರನ್ ಗಳಿಸಿ ಮಿಂಚಿದರು.

ರಾಜ್ಯದ ಪರ ಆಡುತ್ತಿರುವ ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದರು. ಒಟ್ಟು 37 ಎಸೆತ ಎದುರಿಸಿದ ಅವರು ನಾಲ್ಕು ಬೌಂಡರಿ ಸಹಿತ ಕೇವಲ 26 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ಇನ್ನೊಬ್ಬ ಟೀಂ ಇಂಡಿಯಾ ಆಟಗಾರ ದೇವದತ್ತ ಪಡಿಕ್ಕಲ್ 43 ರನ್ ಗಳಿಸಿ ನಾಯಕ ಮಯಾಂಕ್ ಗೆ ಉತ್ತಮ ಸಾಥ್ ನೀಡಿದರು.

ಇದಕ್ಕೆ ಮೊದಲು ನಡೆದಿದ್ದ ರಣಜಿ ಪಂದ್ಯದಲ್ಲಿ ಕೆಎಲ್ ರಾಹುಲ್ ವೈಯಕ್ತಿಕ ಕಾರಣ ನೀಡಿ ಗೈರಾಗಿದ್ದರು. ಆದರೆ ಟೀಂ ಇಂಡಿಯಾಗೆ ಮರಳುವ ಮೊದಲು ದೇಶೀಯ ಪಂದ್ಯ ಆಡಲೇಬೇಕು ಎಂದು ನಿಯಮವಿರುವ ಕಾರಣ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

BCCI Annual Contract: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಯಾವ ಆಟಗಾರರಿಗೆ ಯಾವ ಶ್ರೇಣಿ, ವೇತನವೆಷ್ಟು ಇಲ್ಲಿದೆ ವಿವರ

Virat Kohli: ಶ್ರೇಯಸ್ ಅಯ್ಯರ್ ಎದುರು ಸಂಭ್ರಮಾಚರಿಸಿ ತಾವೇ ಇಕ್ಕಟ್ಟಿಗೆ ಸಿಲುಕಿದ ವಿರಾಟ್ ಕೊಹ್ಲಿ: ನಿಮ್ಗಿದು ಬೇಕಿತ್ತಾ

Rohit Sharma: ಏಯ್ ನಾನು ಔಟಲ್ಲ ಕಣೋ ನಾಟೌಟ್: ಮೈದಾನದಲ್ಲೇ ಜಡೇಜಾಗೆ ಗದರಿದ ರೋಹಿತ್ ಶರ್ಮಾ

IPL 2025 RCB vs PBKS: ನಿಮ್ಮ ಮೈದಾನದಲ್ಲೇ ಗೆದ್ದಿದ್ದೇವೆ ನೋಡ್ಕೋ ಎಂದ ಕೊಹ್ಲಿ, ಶ್ರೇಯಸ್ ಅಯ್ಯರ್ ಗಪ್ ಚುಪ್ Video

RCB vs PBKS Match:ಪಂಜಾಬ್‌ ತವರಿನಲ್ಲೇ ರೀವೆಂಜ್‌ ತೀರಿಸಿಕೊಂಡ ಆರ್‌ಸಿಬಿ

ಮುಂದಿನ ಸುದ್ದಿ
Show comments