Webdunia - Bharat's app for daily news and videos

Install App

ವಿಜಯ್ ಹಜಾರೆ ಟ್ರೋಫಿ: ಶಾರುಖ್ ಅಬ್ಬರ, ಕರ್ನಾಟಕಕ್ಕೆ ಹೀನಾಯ ಸೋಲು

Webdunia
ಮಂಗಳವಾರ, 21 ಡಿಸೆಂಬರ್ 2021 (16:49 IST)
ಜೈಪುರ: ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ 151 ರನ್ ಗಳ ಹೀನಾಯ ಸೋಲುಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ಆರಂಭದಲ್ಲಿ ಭರ್ಜರಿ ಅಡಿಪಾಯ ಹಾಕಿ ಅಂತಿಮ ಐದು ಓವರ್ ನಲ್ಲಿ 60 ರನ್ ಬಾಚಿ ಭರ್ಜರಿ ಮೊತ್ತ ಕಲೆ ಹಾಕಿತು. ತಮಿಳುನಾಡು ಪರ ಶಾರುಖ್ ಖಾನ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಆರು ಸಿಕ್ಸರ್, ಏಳು ಬೌಂಡರಿ ಚಚ್ಚಿ 39 ಎಸೆತಗಳಲ್ಲಿ 79 ರನ್ ಕಲೆ ಹಾಕಿದರು. ಇದರಿಂದಾಗಿ ತಮಿಳುನಾಡು 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 354 ರನ್ ಗಳ ಭರ್ಜರಿ ಮೊತ್ತ ಕಲೆ ಹಾಕಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕರ್ನಾಟಕ ಸಂಪೂರ್ಣ ಮುಗ್ಗರಿಸಿತು. ಎಸ್. ಶರತ್ 43, ಅಭಿನವ್ ಮನೋಹರ್ 34, ಕೆ. ಸಿದ್ಧಾರ್ಥ್ 29, ರೋಹನ್ ಕದಂ 24 ರನ್ ಗಳಿಸಿದರು. ದೇವದತ್ತ್ ಪಡಿಕ್ಕಲ್ ಶೂನ್ಯ, ನಾಯಕ ಮನೀಶ್ ಪಾಂಡೆ ಕೇವಲ 9 ರನ್ ಗಳಿಸಿ ಔಟಾಗಿದ್ದು ದುಬಾರಿಯಾಯಿತು. ಅಂತಿಮವಾಗಿ ಕರ್ನಾಟಕ 39 ಓವರ್ ಗಳಲ್ಲಿ ಕೇವಲ 203 ರನ್ ಗಳಿಗೆ ಆಲೌಟ್ ಆಗಿ ಹೀನಾಯ ಸೋಲೊಪ್ಪಿಕೊಂಡಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Chinnaswamy stampede: ಓಪನ್ ಬಸ್ ನಲ್ಲಿ ಮೆರವಣಿಗೆ ಮಾಡಲು ಬಯಸಿದ್ದ ಆರ್ ಸಿಬಿ, ಹಾಗೇನಾದ್ರೂ ಇದ್ರೆ ಏನಾಗ್ತಿತ್ತು

Chinnaswamy Stampede: ಚಿನ್ನಸ್ವಾಮಿ ಭೀಕರ ಕಾಲ್ತುಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

RCB Bengaluru stampede: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಸಾವು, ನಮ್ಮ ಮೆಟ್ರೋ ಸ್ಥಗಿತ

RCB Victory Parade: M.ಚಿನ್ನಸ್ವಾಮಿಗೆ ಉಚಿತ ಪಾಸ್‌ಗಳು ಲಭ್ಯ

RCB in Bengaluru: ಆಹಾ ಕೊಹ್ಲಿ ಕೈಯಲ್ಲಿ ಕನ್ನಡ ಬಾವುಟ ನೋಡುವುದೇ ಚಂದ video

ಮುಂದಿನ ಸುದ್ದಿ
Show comments