Select Your Language

Notifications

webdunia
webdunia
webdunia
webdunia

ಜಾವಗಲ್ ಶ್ರೀನಾಥ್ ನೀಡಿದ ವರದಿಯಿಂದ ಚಿನ್ನಸ್ವಾಮಿ ಮೈದಾನಕ್ಕೆ ಕುತ್ತು!

ಜಾವಗಲ್ ಶ್ರೀನಾಥ್ ನೀಡಿದ ವರದಿಯಿಂದ ಚಿನ್ನಸ್ವಾಮಿ ಮೈದಾನಕ್ಕೆ ಕುತ್ತು!
ಬೆಂಗಳೂರು , ಸೋಮವಾರ, 21 ಮಾರ್ಚ್ 2022 (09:50 IST)
ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವಿನ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಮ್ಯಾಚ್ ರೆಫರಿಯಾಗಿದ್ದ ಜಾವಗಲ್ ಶ್ರೀನಾಥ್ ನೀಡಿದ ವರದಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕುತ್ತು ಎದುರಾಗಿದೆ.

ಇತ್ತೀಚೆಗೆ ನಡೆದಿದ್ದ ಈ ಟೆಸ್ಟ್ ಪಂದ್ಯಕ್ಕೆ ಬಳಸಲಾಗಿದ್ದ ಚಿನ್ನಸ್ವಾಮಿ ಮೈದಾನದ ಪಿಚ್ ಬಗ್ಗೆ ರೆಫರಿ ಶ್ರೀನಾಥ್ ಐಸಿಸಿಗೆ ವರದಿ ನೀಡಿದ್ದು, ಈ ವರದಿಯಲ್ಲಿ ಚಿನ್ನಸ್ವಾಮಿ ಪಿಚ್ ಗುಣಮಟ್ಟ ಕಳಪೆಯಾಗಿತ್ತು ಎಂದು ವರದಿ ಸಲ್ಲಿಸಿದ್ದಾರೆ. ಪಂದ್ಯದ ಮೊದಲ ದಿನದಿಂದಲೇ ಪಿಚ್ ತಿರುವು ಪಡೆಯುತ್ತಿತ್ತು.

ಅವಧಿಯಿಂದ ಅವಧಿಗೆ ಪಿಚ್ ವಿಪರೀತ ತಿರುವು ಪಡೆಯುತ್ತಿತ್ತು. ಇದು ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟವಾಗಿರಲಿಲ್ಲ ಎಂದು ಶ್ರೀನಾಥ್ ವರದಿ ನೀಡಿದ್ದಾರೆ. ಈ ವರದಿಯ ಪ್ರತಿ ಬಿಸಿಸಿಐಗೂ ನೀಡಲಾಗಿದೆ. ಇದರಿಂದಾಗಿ ಐಸಿಸಿ ಚಿನ್ನಸ್ವಾಮಿ ಮೈದಾನಕ್ಕೆ ಒಂದು ದಂಡದ ಅಂಕ ವಿಧಿಸಿದೆ. ಇದರಿಂದಾಗಿ ಇನ್ನು ಮುಂದೆ ಪಂದ್ಯ ಆಯೋಜಿಸುವ ನಿಟ್ಟಿನಲ್ಲಿ ಮೊದಲ ಆದ್ಯತೆ ಸಿಗುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈ ಸೂಪರ್ ಕಿಂಗ್ಸ್ ಗೆ ಬರಲು ಸ್ಟಾರ್ ಆಟಗಾರನಿಗೆ ವೀಸಾ ಸಮಸ್ಯೆ!