Select Your Language

Notifications

webdunia
webdunia
webdunia
webdunia

ಐಪಿಎಲ್: ತಮ್ಮಿಂದಾಗಿ ಗಾಯವಾದ ಯುವ ಕ್ರಿಕೆಟಿಗನಿಗೆ ಕ್ಷಮೆ ಯಾಚಿಸಿದ ಹಾರ್ದಿಕ್ ಪಾಂಡ್ಯ

ಐಪಿಎಲ್: ತಮ್ಮಿಂದಾಗಿ ಗಾಯವಾದ ಯುವ ಕ್ರಿಕೆಟಿಗನಿಗೆ ಕ್ಷಮೆ ಯಾಚಿಸಿದ ಹಾರ್ದಿಕ್ ಪಾಂಡ್ಯ
ಮುಂಬೈ , ಶನಿವಾರ, 21 ಏಪ್ರಿಲ್ 2018 (09:08 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ತಮ್ಮದೇ ತಂಡದ ಸಹ ಆಟಗಾರನಿಗೆ ಹಾರ್ದಿಕ್ ಪಾಂಡ್ಯ ಎಸೆದ ಎಸೆತವೊಂದು ಗಾಯಕ್ಕೆಡೆ ಮಾಡಿಕೊಟ್ಟಿತು. ಇದಕ್ಕೀಗ ಪಾಂಡ್ಯ ಸಾರಿ ಕೇಳಿದ್ದಾರೆ.

ಪಾಂಡ್ಯ ವಿಕೆಟ್ ಕಡೆಗೆ ಬಾಲ್ ಎಸೆಯುವಾಗ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಬಲ ಕಣ್ಣಿಗೆ ಸಮೀಪದಲ್ಲೇ ಬಾಲ್ ಹಾದು ಹೋಗಿತ್ತು. ಈ ವೇಳೆ ಕಿಶನ್ ಕುಸಿದು ಬಿದ್ದಿದ್ದರು. ಈ ಘಟನೆಗೆ ಟ್ವಿಟರ್ ನಲ್ಲಿ ಭಾರೀ ಪ್ರತಿಕ್ರಿಯೆ ಬಂದಿತ್ತು. ಪಾಂಡ್ಯ ಇದೀಗ ಅಭಿಮಾನಿಗಳ ಮನವಿಗೆ ಕಿವಿಗೊಟ್ಟಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಕಿಶನ್ ಜತೆಗೆ ತೆಗೆಸಿಕೊಂಡಿರುವ ಫೋಟೋ ಪ್ರಕಟಿಸಿರುವ ಹಾರ್ದಿಕ್ ಪಾಂಡ್ಯ ‘ಸಾರಿ ಭಾಯ್.. ಸ್ಟ್ರಾಂಗ್ ಆಗಿ ಇರು’ ಎಂದು ಪಾಂಡ್ಯ ಸಂದೇಶ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಸನ್ ರೈಸರ್ಸ್ ಹೈದರಾಬಾದ್ ಗೆ ಶಿಖರ್ ಧವನ್ ರೂಪದಲ್ಲಿ ದೊಡ್ಡ ಶಾಕ್!