Select Your Language

Notifications

webdunia
webdunia
webdunia
webdunia

IPL 2026: ಸಿಎಸ್ ಕೆ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್: ಅಭಿಮಾನಿಗಳಿಗೆ ಮತ್ತೆ ನಿರಾಸೆಯೇ ಗತಿ

Rohit Sharma
ಚೆನ್ನೈ: ಐಪಿಎಲ್ 2026 ರಲ್ಲಿ ಇಂದು ಸಿಎಸ್ ಕೆ ವಿರುದ್ಧ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಅಭಿಮಾನಿಗಳಿಗೆ ನಿರಾಸೆಯೇ ಗತಿಯಾಗಿದೆ.

ಒಂದು ಕಾಲದ ಚಾಂಪಿಯನ್ ತಂಡಗಳಾದ ಮುಂಬೈ ಮತ್ತು ಸಿಎಸ್ ಕೆ ಎರಡೂ ಈಗ ಸೋಲಿನ ಸುಳಿಯಲ್ಲಿ ಒದ್ದಾಡುತ್ತಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರಾದ ಧೋನಿ ಮತ್ತು ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ಉಳಿದ ಸ್ಟಾರ್ ಗಳು ಹೇಳಿಕೊಳ್ಳುವ ಫಾರ್ಮ್ ನಲ್ಲಿಲ್ಲ.

ಇಂದಾದರೂ ರೋಹಿತ್ ಆಡಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಇಂದೂ ಅವರು ಅಲಭ್ಯರಾಗಿದ್ದಾರೆ. ಇನ್ನು, ಧೋನಿ ಕೂಡಾ ಇನ್ನೂ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅಲಭ್ಯರಾಗಿದ್ದಾರೆ. ಇದರಿಂದ ಅಭಿಮಾನಿಗಳಿಗೆ ನಿರಾಸೆಯೇ ಗತಿಯಾಗಿದೆ.

ಇತ್ತ ಮುಂಬೈ ಇಂಡಿಯನ್ಸ್ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಹೀನಾಯ ಸೋಲುಂಡಿದೆ. ಚೆನ್ನೈ ಕೂಡಾ ಕಳೆದ ಪಂದ್ಯದಲ್ಲಿ ಸೋತಿತ್ತು. ಹೀಗಾಗಿ ಎರಡೂ ತಂಡಗಳಿಗೆ ಇಂದು ಗೆಲುವು ಅನಿವಾರ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2026: ಟೂರ್ನಿಯಲ್ಲಿ ಮೊದಲ ಬಾರಿ ಆರ್‌ಸಿಬಿ ಆಲೌಟ್: ಅಗ್ರಸ್ಥಾನ ಅವಕಾಶವನ್ನು ಕೈಚೆಲ್ಲಿದ ರಜತ್‌ ಪಡೆ